ಪ್ರಜಾಸ್ತ್ರ ಸುದ್ದಿ
ಜಮಖಂಡಿ: ಸಾರ್ವಜನಿಕರ ಸೇವೆಯನ್ನು ಮಾಡುವ ಸದುದ್ದೇಶದಿಂದ ದಳವಾಯಿ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಬಡವರಿಗೆ, ವೃದ್ಧರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳ ಆರೋಗ್ಯ ಸೇವೆಗೆ ಸದಾ ಈ ಆಸ್ಪತ್ರೇ ಶ್ರಮಿಸಲಿದೆ ಎಂದು ಸ.ಸ. ಪ್ರಭುಜಿ ಮಹಾರಾಜರು ಹೇಳಿದರು.
ಸಾವಳಗಿಯಲ್ಲಿ ನೂತನವಾಗಿ ದಳವಾಯಿ ಮೆಟರ್ನಿಟಿ ಮತ್ತು ಸರ್ಜಿಕಲ್ ಆಸ್ಪತ್ರೆಯನ್ನು ಇಂಚಗೇರಿ ಮಠ ಪ್ರಭುಜಿ ಮಹಾರಾಜರು ಉದ್ಘಾಟನೆ ಮಾಡಿ ಮಾತನಾಡಿದರು. ಮನುಷ್ಯನ ಜೀವನದಲ್ಲಿ ಅನಾರೋಗ್ಯ ಸರ್ವೇ ಸಾಮಾನ್ಯ. ಅನಾರೋಗ್ಯಕ್ಕೆ ಪೂರಕ ಚಿಕಿತ್ಸೆ ನೀಡುವ ಮೂಲಕ ಅಳಿಲು ಸೇವೆಯನ್ನು ದಳವಾಯಿ ಆಸ್ಪತ್ರೆ ಮಾಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಪ್ರಭುಲಿಂಗೇಶ್ವರ ಶುಗರ್ಸ್ ಅಧ್ಯಕ್ಷ ಜಗದೀಶ ಗುಡಗುಂಟಿಮಠ, ಶ್ರೀಶೈಲ ದಳವಾಯಿ, ಈಶ್ವರ ವಾಳೆನ್ನವರ, ತುಕಾರಾಮ ಬಾಪಕರ, ಪುಲಕೇಶಿ ನಾಂದ್ರೇಕರ, ಡಾ.ಸತೀಶ ದಳವಾಯಿ, ಡಾ.ವಿವೇಕಾನಂದ ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ರು.