ಸಿಂದಗಿಯಲ್ಲಿ ಭರ್ಜರಿಯಾಗಿದೆ ಹಬ್ಬದ ವ್ಯಾಪಾರ

413

ಸಿಂದಗಿ: ನಾಡಿನ ಎಲ್ಲೆಡೆ ದೀಪಾವಳಿ ಹಬ್ಬದ ಖರೀದಿ ಜೋರಾಗಿ ನಡೆದಿದೆ. ವಿವಿಧ ಹೂವು, ಹಣ್ಣು, ಬಾಳೆದಿಂಡು, ಕಬ್ಬಿನದಂಟು, ಮಾವಿನ ಎಲೆ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಗ್ರಿಗಳ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ಸಂಜೆ ನಡೆಯುವ ಲಕ್ಷ್ಮಿ ಪೂಜೆಗೆ ಸಕಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ.

ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿಯೇ ಖರೀದಿಯಲ್ಲಿ ತೊಡಗಿದ್ದ ಸಾರ್ವಜನಿಕರು

ಅದೇ ರೀತಿ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಕೇಂದ್ರ ಬಸ್ ನಿಲ್ದಾಣ, ಹಳೆ ಬಜಾರ್, ವಿವೇಕಾನಂದ ಸರ್ಕಲ್, ಗೋಲಗೇರಿ ರೋಡ್ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿದೆ. ಮಳೆಯಿಂದ ಒಂದಿಷ್ಟು ಸಮಸ್ಯೆಯಾಗಿದ್ದು, ಇದರ ನಡುವೆಯೇ ಜನರು ಹಬ್ಬದ ಖುಷಿಯಲ್ಲಿದ್ದಾರೆ.

ವಿವೇಕಾನಂದ ಸರ್ಕಲ್

ದಿನದ ರೇಟಿಗಿಂತ ಇಂದು ಹೂವು, ಹಣ್ಣು, ಬಾಳೆದಿಂಡುಗಳ ಬೆಲೆ ಮೂರು ಮಟ್ಟು ಹೆಚ್ಚಾಗಿದೆ. ಜೇಬಿಗೆ ಒಂದಿಷ್ಟು ಪೆಟ್ಟು ಬೀಳ್ತಿದೆ. ದೊಡ್ಡ ಹಬ್ಬ ಆಚರಣೆ ಮಾಡಲೇಬೇಕು. ಹೀಗಾಗಿ ಬೆಳ್ಳಂಬೆಳಗ್ಗೆಯೇ ಜನರು ಮಾರ್ಕೆಟ್ ಗೆ ಬಂದು ಖರೀದಿಯಲ್ಲಿ ತೊಡಗಿರುವುದು ಸಾಮಾನ್ಯವಾಗಿತ್ತು.

ಗೋಲಗೇರಿ ರೋಡ್



Leave a Reply

Your email address will not be published. Required fields are marked *

error: Content is protected !!