ಮತ್ತೊಂದು ಪ್ರೇಮ ಕಾವ್ಯಕ್ಕೆ ಜಯತೀರ್ಥ ರೆಡಿ

211

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಒಲುವೆ ಮಂದಾರ, ಬ್ಯೂಟಿಫುಲ್ ಮನಸ್ಸುಗಳು, ಬೆಲ್ ಬಾಟಂ ಅನ್ನೋ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ಜಯತೀರ್ಥ ಅವರು, ಗೌರಿ ಗಣೇಶ ಹಬ್ಬದ ಪ್ರಯುಕ್ತ ತಮ್ಮ ಮುಂದಿನ ಚಿತ್ರದ ಕುರಿತು ಅನೌನ್ಸ್ ಮಾಡಿದ್ದಾರೆ. ‘ಕೈವ’ ಅನ್ನೋ ಮತ್ತೊಂದು ಪ್ರೇಮ ಕಾವ್ಯ ತೆರೆಗೆ ತರಲು ಸಜ್ಜಾಗಿದ್ದಾರೆ.

ನವಿರಾದ ಪ್ರೇಮವನ್ನು ತಮ್ಮದೆ ಶೈಲಿಯಲ್ಲಿ ನಿರೂಪಿಸಿ ಗೆದ್ದಿದ್ದಾರೆ. ಸಧ್ಯ ಬನಾರಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದು ನವೆಂಬರ್ 4ರಂದು ರಿಲೀಸ್ ಆಗುತ್ತಿದೆ. ಇದರ ಜೊತೆಗೆ 1983ರ ಮಾಸ್ ಲವ್ ಸ್ಟೋರಿಯೊಂದು ಹೇಳುವುದಕ್ಕೆ ಸಿದ್ಧವಾಗಿದ್ದು, ಬಜಾರ್ ಚಿತ್ರದ ಖ್ಯಾತಿ ಧನವೀರ್ ನಟಿಸುತ್ತಿದ್ದಾರೆ.

ಈಗ ಬಿಟ್ಟಿರುವ ಪೋಸ್ಟರ್ ನಲ್ಲಿ ರಕ್ತಸಿಕ್ತವಾದ ಕೈ ಇದ್ದು, ಎಸ್ ಅನ್ನೋ ಹಚ್ಚೆ ಇದೆ. ಹಿಂಭಾಗದಲ್ಲಿ ಮಲ್ಲೇಶ್ವರಂ ಏರಿಯಾ ತೋರಿಸಲಾಗಿದೆ. ಈ ಮೂಲಕ ಇದೊಂದು ಪಕ್ಕಾ ಮಾಸ್ ಲವ್ ಸ್ಟೋರಿ ಚಿತ್ರವಾಗಿದೆ. ಸೆಪ್ಟೆಂಬರ್ 8ಕ್ಕೆ ಹೀರೋ ಲುಕ್ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ. ರವೀಂದ್ರ ಕುಮಾರ್ ಕೈವ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!