ಟಾಲಿವುಡ್ ನಿರ್ದೇಶಕ ಸೂರ್ಯ ಕಿರಣ್ ನಿಧನ

198

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹೈದ್ರಾಬಾದ್: ತೆಲುಗು ಸಿನಿ ದುನಿಯಾದ ಖ್ಯಾತ ನಿರ್ದೇಶಕ ಸೂರ್ಯ ಕಿರಣ್(51) ಸೋಮವಾರ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ಸತ್ಯಂ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದರು. ನಟಿ ಕಲ್ಯಾಣಿಯೊಂದಿಗೆ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂದೆ ಈ ಜೋಡಿ ಬೇರ್ಪಟ್ಟಿತ್ತು. ಸಿನಿ ರಂಗದಿಂದಲೂ ದೂರ ಉಳದಿದ್ದ ಸೂರ್ಯ ಕಿರಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಸುಮಾರು 7 ವರ್ಷಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ಇವರು 2020ರಲ್ಲಿ ತೆಲುಗು ಬಿಗ್ ಬಾಸ್ ಸೀಸನ್ 4ರಲ್ಲಿ ಕಾಣಿಸಿಕೊಂಡು ಮೊದಲ ವಾರದಲ್ಲೇ ಹೊರ ಬಂದಿದ್ದರು. ಪತ್ನಿ ಕಲ್ಯಾಣಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ. ಸೂರ್ಯ ಕಿರಣ್ ನಿಧನಕ್ಕೆ ಟಾಲಿವುಡ್ ಸಿನಿ ಮಂದಿ ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!