ಪ್ರಜಾಸ್ತ್ರ ಅಪರಾಧ ಸುದ್ದಿ
ನವದೆಹಲಿ: ತನ್ನ ಪ್ರಿಯಕರ ಜೊತೆ ಮದುವೆಯಾಗುವ ಸಂಬಂಧ ಪತಿಯನ್ನ ಹತ್ಯೆ ಮಾಡಿದ ಮಹಿಳೆ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ. ಬುಧವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಮಹಿಳೆ, ಈಕೆ ಪ್ರೇಮಿ ವೀರು ಬರ್ಮಾ ಹಾಗೂ ಸಹಾಯ ಮಾಡಿದ ಮನೆ ಕೆಲಸದಾತ ಕರಣ್ ಎಂಬುವರನ್ನ ಬಂಧಿಸಲಾಗಿದೆ.
30 ವರ್ಷದ ಮಹಿಳೆ ಹಾಗೂ ಪತಿ ನಡುವೆ 20 ವರ್ಷ ಅಂತರವಿದೆ. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರ ನಡವೆ ಮಹಿಳೆ ವೀರು ಬರ್ಮಾ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಹೀಗಾಗಿ ಆತನೊಂದಿಗೆ ಮದುವೆಯಾಗಲು, ಗಂಡನ ಸಾವಿಗೆ ಪ್ಲಾನ್ ಮಾಡಿದ್ದಾಳೆ.
ಊಟದ ಜೊತೆಗೆ ನಿದ್ದೆಮಾತ್ರೆಯನ್ನ ನೀಡಿದ್ದಾಳೆ. ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ನಂತರ ಮನೆ ಕೆಲಸದವನೊಂದಿಗೆ ಆಸ್ಪತ್ರೆಗೆ ತೆಗೆದುಕೊಂಡು ಬಂದು, ಆತ್ಮಹತ್ಯೆಯ ನಾಟಕವಾಡಿದ್ದಾಳೆ. ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿರುವ ವಿಷ್ಯ ತಿಳಿಸಿದ್ದಾರೆ. ಆಗ ಮಹಿಳೆಯ ವರ್ತನೆಯನ್ನ ಸೂಕ್ಷ್ಮವಾಗಿ ಗಮನಿಸಿದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆಸ್ಪತ್ರೆಗೆ ಬಂದು ಮಹಿಳೆ ಹಾಗೂ ಕರಣ್ ಎಂಬಾತನನ್ನ ವಿಚಾರಣೆ ಮಾಡಿದ್ದಾರೆ. ಇಬ್ಬರ ಹೇಳಿಕೆ ವಿಭಿನ್ನವಾಗಿವೆ. ಆತ್ಮಹತ್ಯೆ ಮಾಡಿಕೊಂಡರುವ ಎಂದು ಹೇಳಿದ ಜಾಗಕ್ಕೆ ಹೋದ ಪೊಲೀಸರಿಗೆ ಅಲ್ಲಿ ಯಾವುದೆ ರೀತಿಯ ಸಾಕ್ಷಿ ಸಿಕ್ಕಿಲ್ಲ. ನಂತರ ಇಬ್ಬರನ್ನ ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಇದೀಗ ಮೂವರನ್ನ ಬಂಧಿಸಲಾಗಿದೆ.