ನನಗೆ ವಿಪಕ್ಷ ನಾಯಕ ಸ್ಥಾನ ಬೇಕಿಲ್ಲ: ಹೆಚ್ಡಿಕೆ

189

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್, ವಿಪಕ್ಷಗಳೊಂದಿಗೆ ಹೋಗುತ್ತಾ, ಬಿಜೆಪಿಯೊಂದಿಗೆ ಸೇರಿಕೊಳ್ಳುತ್ತಾ ಅನ್ನೋ ಹಲವು ಪ್ರಶ್ನೆಗಳಿವೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಎನ್ ಡಿಎ ಜೊತೆ ಮೈತ್ರಿ ಆಗಲಿ, ನನಗೆ ಕೇಂದ್ರದಲ್ಲಿ ಸಚಿವ ನೀಡುವ ವಿಚಾರ ಗೊತ್ತಿಲ್ಲ ಅಂತಾ ಹೇಳಿದರು.

ನನಗೆ ಎನ್ ಡಿಎ, ಮಹಾಘಟಬಂಧನ್ ಎರಡರಿಂದಲೂ ಆಹ್ವಾನವಿಲ್ಲ. ಆಹ್ವಾನ ಬಂದಾಗ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ. ಇನ್ನು ನನಗೆ ವಿಪಕ್ಷ ನಾಯಕನ ಸ್ಥಾನವೂ ಬೇಕಿಲ್ಲ. ಕಾಲ ಹರಣ ಮಾಡದೆ ಸಮರ್ಥ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದು ದೆಹಲಿ ನಾಯಕರಿಗೂ ನಾನು ಹೇಳುತ್ತೇನೆ.

ನಾವು 19 ಸ್ಥಾನ ಗೆದ್ದಿದ್ದೇವೆ. ಅವರು 65 ಸ್ಥಾನ ಗೆದ್ದಿದ್ದಾರೆ. ಅವರಲ್ಲಿಯೂ ಮಾಜಿ ಮುಖ್ಯಮಂತ್ರಿಗಳು ಇದ್ದಾರೆ. ಅನೇಕರು ಸಚಿವರಾಗಿದ್ದವರು ಇದ್ದಾರೆ. ಅವರಲ್ಲಿಯೇ ಸಮರ್ಥ ವಿಪಕ್ಷ ನಾಯಕನ ಆಯ್ಕೆ ಮಾಡಲಿ ಎಂದು ಹೇಳುತ್ತೇನೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!