ಸಿಂದಗಿ: ತಾಲೂಕಿನ ಚಿಕ್ಕರೂಗಿ ಹಿಟ್ಟನಹಳ್ಳಿ ರಸ್ತೆಯ ಕೆನಾಲ್ ಬ್ರಿಡ್ಜ್ ಬಳಿ, ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಬೈಕ್ ನಲ್ಲಿ 960 ಗ್ರಾಂ ಗಾಂಜಾ ಸಾಗಿಸಲಾಗ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಜಪ್ತಿ ಮಾಡಲಾಗಿದೆ.
ಅಬಕಾರಿ ಜಂಟಿ ಆಯುಕ್ತರಾದ ಡಾ.ವೈ ಮಂಜುನಾಥ್ ಹಾಗೂ ಅಬಕಾರಿ ಉಪ ಆಯುಕ್ತರಾದ ರವಿಶಂಕರ್ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ನಿರೀಕ್ಷಕರಾದ ಎ ಎ ಮುಜಾವರ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ಮಹೇಶ ಪುಠಾಣಿ, ವಿಜಯಕುಮಾರ ಹಿರೇಮಠ ತಂಡ ದಾಳಿ ಮಾಡಿದೆ.
960 ಗ್ರಾಂ ಗಾಂಜಾದ ಮೌಲ್ಯ ಅಂದಾಜು 55 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ. ಆರೋಪಿ ಗುರುಸಂಗಪ್ಪ ನಾಯ್ಕವಾಡಿ(ತಳವಾರ) ಈತನ ವಿರುದ್ಧ ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿ ವೇಳೆ ಸಿಬ್ಬಂದಿಯಾದ ಎನ್ ಎಸ್ ಸಾತಲಗಾ೦ವ, ಆರ್ ಕೆ ಅತಾಪಿ , ಆರ್ ಎಸ್ ಮಾನೆ, ರಾಜು ಮುಳಸಾವಳಗಿ ಹಾಗೂ ಡ್ರೈವರ್ ಯಮನಪ್ಪ ಹರಿಜನ ಇದ್ದರು.