ಪ್ರಜಾಸ್ತ್ರ ಸುದ್ದಿ
ಕೇಂಬ್ರಿಡ್ಜ್: ಭಾರತ ಮಾತನಾಡಿದಾಗ ಮಾತ್ರ ಜೀವಂತವಾಗಿರುತ್ತದೆ. ಮೌನವಾಗಿದ್ದಷ್ಟು ಸಾಯುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂಬ್ರಿಡ್ಜ್ ವಿವಿಯ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಇಂಡಿಯಾ @ 75 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ ಅಭಿವ್ಯಕ್ತಿ ಕ್ಷೇತ್ರಗಳಾದ ಸಂಸತ್, ಪ್ರಜಾಪ್ರಭುತ್ವದ ಮೂಲ ರಚನೆ ಹಾಗೂ ಚುನಾವಣೆ ವ್ಯವಸ್ಥೆ ಮೇಲೆ ದಾಳಿ ನಡೆಸಲಾಗುತ್ತಿದೆ. ಇದರಿಂದಾಗಿ ಈ ಎಲ್ಲ ಕಡೆ ದೊಡ್ಡ ಮೌನ ಆವರಿಸಿಕೊಂಡಿದೆ. ಭಾರತ ಒಂದು ರಾಷ್ಟ್ರವಾಗಿರುವ ಬದಲು ಒಕ್ಕೂಟ ವ್ಯವಸ್ಥೆಯಿಂದ ರಚನೆಯಾಗಿದೆ. ಇದು ಪ್ರತಿಯೊಬ್ಬರಿಗೂ ಸುಂದರ ಕಲ್ಪನೆ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.