ಪ್ರಜಾಸ್ತ್ರ ಸುದ್ದಿ
ಬಳ್ಳಾರಿ: ಹೊಸ ಪಕ್ಷ ಸ್ಥಾಪನೆ ಮಾಡಿರುವ ಜನಾರ್ಧನ್ ರೆಡ್ಡಿ ಅಣ್ಣ ಸೋಮಶೇಖರ್ ರೆಡ್ಡಿ ವಿರುದ್ಧ ಪತ್ನಿ ಅರುಣಾ ಲಕ್ಷ್ಮಿಯನ್ನು ಕಣಕ್ಕೆ ಇಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಸೋಮಶೇಖರ್ ರೆಡ್ಡಿ, ನನ್ನ ಹಾಗೇ ಜನಾರ್ಧನ್ ರೆಡ್ಡಿಗೆ ತ್ಯಾಗದ ಮನೋಭಾವ ಇಲ್ಲ. ಬಳ್ಳಾರಿಯಲ್ಲಿ ನೂರಕ್ಕೆ ನೂರರಷ್ಟು ನಾನೇ ಬಿಜೆಪಿ ಅಭ್ಯರ್ಥಿ ಎಂದರು.
ಸಹೋದರನಿಗಾಗಿ 6 ತಿಂಗಳು ಜೈಲಿನಲ್ಲಿದ್ದೆ. ಅರುಣಾ ಲಕ್ಷ್ಮಿ ನನ್ನ ಋಣ ತೀರಿಸಲು ಆಗಲ್ಲ. ಅವರ ಸ್ಪರ್ಧೆಯಿಂದ ನನಗೆ ನಷ್ಟವಿಲ್ಲ. ಕಾಂಗ್ರೆಸ್ ನಷ್ಟವಾಗುತ್ತೆ. ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ. ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಅಂತಾ ಹೇಳಿದರು.