ಸಾವಿನ ಮನೆ ಕದ ತಟ್ಟಿ ಬಂದ ವೃದ್ಧೆ

352

ಕಲಬುರಗಿ: ಒಮ್ಮೊಮ್ಮೆ ನಾವು ಮಾಡುವ ಅವಸರದಿಂದಾಗುವ ಅನಾಹುತ ನೆನಸಿಕೊಂಡ್ರೆ ಎದೆ ಝಲ್ ಎನ್ನುತ್ತೆ. ಇಂತಹ ಅವಸರದಿಂದಾಗಿ ವೃದ್ಧೆಯೊಬ್ಬರು ಸಾವಿನ ಮನೆ ಕದ ತಟ್ಟಿಬಂದಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ರೈಲ್ವೆ ಸ್ಟೇಷನ್ ನಲ್ಲಿ ಸ್ವಲ್ಪದರಲ್ಲಿ ಅನಾಹುತವೊಂದು ತಪ್ಪಿದೆ.

ಚಿತ್ತಾಪುರ ರೈಲ್ವೆ ಸ್ಟೇಷನ್ ನ ತಾಂಡಾ ನಿವಾಸಿ ಮಾನಿಬಾಯಿ ಚಂದರ್ ಅನ್ನೋ ವೃದ್ಧೆ, ತಾಂಡಾಕ್ಕೆ ಹೋಗಲು ರೈಲು ಹಳಿ ದಾಟಲು ಹೋಗಿದ್ದಾಳೆ. ದಿಢೀರ್ ಅಂತಾ ಗೂಡ್ಸ್ ರೈಲು ಬಂದಿದೆ. ತಕ್ಷಣ ಜನ ಕೂಗಿಕೊಂಡು ಹಳಿಗಳ ಮಧ್ಯ ಮಲಗಲು ಹೇಳಿದ್ದಾರೆ. ಆಗ ಮಾನಿಬಾಯಿ ಹಳಿಗಳ ಮಧ್ಯ ಮಲಗಿದ್ದಾಳೆ. ರೈಲು ಪಾಸಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಡೆದ ಘಟನೆಯಿಂದ ವೃದ್ಧೆ ಇದೀಗ ಚೇತರಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!