ಪ್ರಜಾಸ್ತ್ರ ಸುದ್ದಿ
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್, ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ ಸಾಕಷ್ಟು ಕಾರಣಗಳಿಗೆ ಬಿಟೌನ್ ದುನಿಯಾದ ಕೆಲ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಮಹಾನಾಡಿನ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ, ಕಂಗನಾ ಮಾಡ್ತಿರುವ ಆರೋಪಗಳಾಗಿವೆ.
ಇದೀಗ ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗ್ತಿದೆ. ಸ್ವಾತಂತ್ರ್ಯವನ್ನ ಹತ್ತಿಕ್ಕಲು ನೋಡಲಾಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ದೇ, ಶಿವಸೇನಾದ ಸಂಜಯ ರಾವತ್, ನನ್ಗೆ ನೇರವಾಗಿ ಬೆದರಿಕೆ ಹಾಕಿದ್ದು, ಮುಂಬೈಗೆ ಬರಬೇಡಿ ಎಂದಿದ್ದಾರೆ. ಮುಂಬೈ ಪೊಲೀಸರ ಬಗ್ಗೆ ನನ್ಗೆ ನಂಬಿಕೆ ಇಲ್ಲ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಜಯ, ಅಹಮದಾಬಾದ್ ನಗರವನ್ನ ಹೀಗೆ ಹೇಳುವ ಧೈರ್ಯ ಆಕೆಗೆ ಇದ್ಯಾ? ಮುಂಬೈ ಕಂಗನಾ ಹೆಸರು, ಹಣ, ಕೀರ್ತಿ ನೀಡಿದೆ. ಮುಂಬೈ ಹಾಗೂ ಮುಂಬೈ ಪೊಲೀಸರ ಹೆಸರು ಕೆಡಿಸಲು ಹೀಗೆ ಮಾಡ್ತಿದ್ದಾಳೆ ಎಂದು ಕಿಡಿ ಕಾರಿದ್ದಾರೆ.