ಎಂಎಲ್ಸಿ ಚುನಾವಣೆ ಘೋಷಣೆ

221

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಚುನಾವಣೆ ಆಯೋಗ ದಿನಾಂಕ ಘೋಷಿಸಿದೆ. ಜೂನ್ 14, 2022ರಂದು ಅಧಿಕಾರ ಕೊನೆಗೊಳ್ಳುತ್ತಿದೆ. ಜೂನ್ 3ರಂದು ಮತದಾನ ನಡೆಯಲಿದೆ.

ಮೇ 17 ಅಧಿಸೂಚನೆ. ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಮೇ 25 ನಾಮಪತ್ರ ಪರಿಶೀಲನೆ, ಮೇ 27 ನಾಮಪತ್ರ ವಾಪಸ್ ಪಡೆಯುವ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ.

ಸಂಜೆ 5ಗಂಟೆಗೆ ಮತ ಏಣಿಕೆ ಹಾಗೂ ಫಲಿತಾಂಶ ಪ್ರಕಟ. ಜೂನ್ 7ಕ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಲಾಗಿದೆ. ಲಕ್ಷ್ಮಣ ಸವದಿ, ಅಲ್ಲಂ ವೀರಭದ್ರಪ್ಪ, ಲೇಹರ್ ಸಿಂಗ್, ವೀಣಾ ಅಚ್ಚಯ್ಯ.ಎಸ್, ರಾಮಪ್ಪ ತಿಮ್ಮಾಪುರ್, ಹೆಚ್.ಎಂ ರಮೇಶಗೌಡ, ನಾರಾಯಣಸ್ವಾಮಿ ಕೆ.ವಿ ಅವರ ಅಧಿಕಾರ ಅವಧಿ ಮುಗಿಯಲಿದೆ.




Leave a Reply

Your email address will not be published. Required fields are marked *

error: Content is protected !!