ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ಅವಮಾನ: ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ

336

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ ಶಾ, ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಿದ್ದಾರೆ. ಅದೆ ರೀತಿ ಜನವರಿ 16, ಶನಿವಾರದೊಂದು ಶಿವಮೊಗ್ಗದ ಭದ್ರಾವತಿಯಲ್ಲಿ ಕೇಂದ್ರ ಕ್ಷಿಪ್ರ ಕಾರ್ಯಪಡೆಯ ತರಬೇತಿ ಕೇಂದ್ರಕ್ಕೆ ಭೂಮಿ ಪೂಜೆ ಮಾಡಲಾಯ್ತು.

ಅಮಿತ ಶಾ ಕ್ಷಿಪ್ರ ಕಾರ್ಯಪಡೆ ತರಬೇತಿ ಕೇಂದ್ರದ ಭೂಮಿ ಪೂಜೆ ಸಲ್ಲಿಸಿ, ಶಿಲನ್ಯಾಸ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಬಳಿಸಿರುವ ಬೃಹತ್ ಬ್ಯಾನರ್ ಹಾಗೂ ಶಿಲನ್ಯಾಸದಲ್ಲಿ ಎಲ್ಲಿಯೂ ಕನ್ನಡ ಬಳಕೆ ಮಾಡಿಯೇ ಇಲ್ಲ. ಕನ್ನಡ ನೆಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಇಲ್ಲದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬ್ಯಾನರ್ ತುಂಬ ಹಿಂದಿ ರಾರಾಜಿಸುತ್ತಿತ್ತು. ಇನ್ನು ನೆನಪಿಗಾಗಿ ಉಳಿಯುವ ಶಿಲನ್ಯಾಸದಲ್ಲಿಯೂ ಕನ್ನಡವೇ ಇಲ್ಲ. ಹಿಂದಿ, ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕನ್ನಡ ಮರೆತಿದೆ. ಹೀಗಾಗಿ ನಾಡಿನ ಜನತೆ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದೆ.




Leave a Reply

Your email address will not be published. Required fields are marked *

error: Content is protected !!