ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ನಾನಾ ಭಾಗದ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಪೇ ಚರ್ಚಾ ನಡೆಸಿದ್ದಾರೆ. ಟಲ್ಕಟೂರ್ ಕ್ರೀಡಾಂಗಣದಲ್ಲಿ ಪರೀಕ್ಷೆ ಪೇ ಚರ್ಚಾ-2020 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಬೋರ್ಡಿಂಗ್ ಪರೀಕ್ಷೆಗಳನ್ನ ಎದುರಿಸುವುದು ಹೇಗೆ ಅನ್ನೋದು ಕುರಿತು ಮಕ್ಕಳೊಂದಿಗೆ ಮಾತ್ನಾಡಿದ್ದಾರೆ. ಇದೇ ವೇಳೆ ಚಂದ್ರಯಾನ-2 ಫೇಲ್ ಆದ ಕುರಿತು ಮಾತ್ನಾಡಿದ್ದಾರೆ. ಉಡಾವಣೆ ಟೈಂನಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ಕೆಲವರು ಭಾಗವಹಿಸಬೇಡಿ. ಯಶಸ್ವಿಯಾಗೋದು ಡೌಟ್ ಅಂತಾ ಹೇಳಿದ್ರು. ಒಂದು ವೇಳೆ ವಿಫಲವಾದ್ರೆ ಏನು ಮಾಡುವುದು ಅಂತಾ ಹೇಳಿದ್ರು. ವೈಫಲ್ಯದಲ್ಲಿ ಯಶಸ್ಸಿನ ಶಿಕ್ಷಣ ಸಿಗುತ್ತೆ. ಹೀಗಾಗಿ ಇದ್ರಿಂದ ನಾನು ಪಾಠ ಕಲಿಯುತ್ತೇವೆ ಅಂತಾ ಹೇಳಿದ್ರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸೋಲು ಗೆಲುವಿನ ಪಾಠ ಮಾಡಿದ್ದಾರೆ.