ಪ್ರಜಾಸ್ತ್ರ ರಾಷ್ಟ್ರೀಯ ಸುದ್ದಿ
ಕಾಸರಗೋಡು: ಪಿಎಫ್ಐ ಸಂಘಟನೆಯ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ಮಾಡಿರುವುದನ್ನು ಖಂಡಿಸಿ ಶುಕ್ರವಾರ ನೀಡಿದ್ದ ಬಂದ್ ಹಿಂಸಾಚಾರ ಪಡೆದುಕೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪುತ್ತೂರ ಹತ್ತಿರದ ಕೊಪ್ಪರ ಬಳಿ ಲಾರಿವೊಂದಕ್ಕೆ ಕಲ್ಲು ಎಸೆಯಲಾಗಿದೆ. ತಿರುವನಂತಪುರಂ, ತಪುರ, ಕೊಲ್ಲಂ, ಕಲ್ಲಿಕೋಟೆ, ಕೊಚ್ಚಿ, ಆಲಪ್ಪುಳ, ತೃಶೂರ, ಕಣ್ಣೂರ ಸೇರಿ ಅನೇಕ ಕಡೆ ಹಿಂಸಾಚಾರ ನಡೆದಿದೆ. ಕೆಎಸ್ಆರ್ ಟಿಸಿ ಬಸ್ ಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಕೊಯಂಬತ್ತೂರು ಬೆಟ್ಟದೂರು ಎಂಬಲ್ಲಿ ಬಿಜೆಪಿ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.
ಇನ್ನು ಪಿಎಫ್ಐ ನೀಡಿರುವ ಹರತಾಳ ವಿರುದ್ಧ ಹೈಕೋರ್ಟ್ ಸ್ವತಃ ಕೇಸ್ ದಾಖಲಿಸಿಕೊಂಡಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಗೊಳಿಸಿದರೆ ಮತ್ತೊಂದು ಕೇಸ್ ದಾಖಲಿಸವುದಾಗಿ ಹೇಳಿದೆ.