ಧಾರವಾಡದಲ್ಲಿ ಗುಂಡಿನ ಸದ್ದು

267

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ವಿದ್ಯಾಕಾಶಿಯಲ್ಲಿ ಬುಧವಾರ ಗುಂಡಿನ ಸದ್ದು ಕೇಳಿಸಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಶಾಂತ್ ಅಗರ್ವಾಲ್ ಹಾಗೂ ಪವನ್ ಕುಲಕರ್ಣಿ ಎಂಬುವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸುಶಾಂತ್ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಅತ್ತಿಕೊಳ್ಳ ಬಡಾವಣೆಯಲ್ಲಿ ನಡೆದಿದೆ.

ಸುಶಾಂತ್ ಹಾಗೂ ಪವನ್ ಎಂಬುವರ ನಿವೇಶನಗಳು ಅಕ್ಕಪಕ್ಕದಲ್ಲಿವೆ. ಇವರಿಬ್ಬರ ನಡುವೆ ಮೊದಲಿನಿಂದಲೂ ಭೂವಿವಾದ ನಡೆದುಕೊಂಡು ಬಂದಿದೆ. ಪವನ್ ಗೆ ಅಲ್ಲಿ ಕೆಲಸ ಮಾಡದಂತೆ ಸುಶಾಂತ್ ಹೇಳಿದ್ದಾನೆ. ಆಗ ಗಲಾಟೆ ನಡೆದಿದೆ. ಈ ವೇಳೆ ಸುಶಾಂತ್ ತನ್ನ ಆತ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಹೇಳಿದ್ದಾನೆ.

ವಿದ್ಯಾಗಿರಿ ಠಾಣೆ ಪೊಲೀಸರು ಸುಶಾಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯಸ್ಥೆಯ ಡಿಸಿಪಿ ರಾಜೀವ್ ಎಂ, ಅವರು ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!