ಸಿಂದಗಿ: ಪಟ್ಟಣದ ಪುರಸಭೆ ಎದುರು ಸಿಂದಗಿ ನಗರ ಸುಧಾರಣಾ ಸಮಿತಿ ವತಿಯಿಂದ, ನಗರ ಸಮಸ್ಯೆ ಆಗ್ರಹಿಸಿ ಪ್ರತಿಭಟನೆ ಮಾಡಲಾಯ್ತು. ಪಟ್ಟಣದ ವಿವೇಕಾಂನದ ಸರ್ಕಲ್ ನಿಂದ ಪುರಸಭೆವರೆಗೂ ಮೆರವಣಿಗೆ ನಡೆಸಿದ ಸುಮಾರು 250 ಜನ ಪ್ರತಿಭಟನಾಕಾರರು, ಪುರಸಭೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ್ರು.
ಪ್ರಮುಖವಾಗಿ 12ನೇ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ, 6ನೇ ವಾರ್ಡಿನ ಕಳಪೆ ಸಿಸಿ ರೋಡ್ ಕಮಾಗಾರಿ ಮಾಡಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಲಾಯ್ತು. 110ಕ್ಕೂ ಹೆಚ್ಚು ಜನ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 250 ಜನ ಪುರಸಭೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ರು. ಬಳಿಕ ಪುರಸಭೆ ಮುಖ್ಯಾಧಿಕಾರಿ ಸಯೀದ್ ಅಹ್ಮದ ಅವರಿಗೆ ಮನವಿ ಪತ್ರ ಸಲ್ಲಿಸಿದ್ರು.
ಸಿಂದಗಿ ನಗರ ಸುಧಾರಣಾ ಸಮಿತಿ ಅಧ್ಯಕ್ಷರಾದ ಅಶೋಕ ಅಲ್ಲಾಪುರ, ಉಪಾಧ್ಯಕ್ಷರಾದ ಶ್ರೀಶೈಲ ಯಳಮೇಲಿ, ಶಾಂತು ರಾಣಾಗೌಡ, ಶಿವಾನಂದ ತಾವರಕೇರ, ಅವದೂತ ಜೋಶಿ, ಸುನಾಂದ ಯಂಪುರೆ, ರವಿ ಕಟಗಿ, ಅಶೋಕ ನೆಗಿನಾಳ, ಬೋರಮ್ಮ ಕರಪುರಮಠ, ರಾಜು ಬಾಸಗಿ, ಪಿಂಟು ಯಾತ್ನೂರ, ದ್ಯಾಮಗೊಂಡ, ರಾಮು ಜೋಶಿ ಸೇರಿದಂತೆ ಅನೇಕ ಜನ ಮುಖಂಡರು ಈ ವೇಳೆ ಭಾಗವಹಿಸಿದ್ರು.