ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಳೆದ ಮೂರ್ನಾಲ್ಕು ದಿನಗಳ ಕಾಲ ಒಂದಿಷ್ಟು ಬಿಡುವು ಕೊಟ್ಟಿದ್ದ ಮಳೆ ಸೋಮವಾರ ಸಂಜೆ ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ಸುಮಾರು 7.30ರ ಸಮಯದಲ್ಲಿ ಒಂದಿಷ್ಟು ಮಳೆಯ ಸಿಂಚನವಾಗಿದೆ.
ಗಣೇಶ ಚತುರ್ಥಿ ಮುಗಿದರೂ ಮಳೆಯ ಆರ್ಭಟ ಆಗಾಗ ಮುಂದುವರೆಯುತ್ತಿದೆ. ಹೀಗಾಗಿ ಜನರು ಈ ಬಾರಿಯ ದೀಪಾವಳಿವರೆಗೂ ಮಳೆಯಾಗುವ ಲಕ್ಷಣವಿದೆ ಎನ್ನುತ್ತಿದ್ದಾರೆ. ದಿಢೀರ್ ಎಂದು ಮುಂಜಾನೆ, ಮಧ್ಯಾಹ್ನ, ಸಂಜೆ ಮಳೆ ಕಾಣಿಸಿಕೊಳ್ಳುತ್ತಿದೆ. ಸಾಧಾರಣ ಪ್ರಮಾಣದಲ್ಲಿ ಮಳೆಯಾದರೂ ಒಂದಿಷ್ಟು ಕಿರಿಕಿರಿಯಾಗುವುದು ಮಾತ್ರ ಸತ್ಯ.