ಮುದ್ದೇಬಿಹಾಳ: ನಿನ್ನೆ ಭರ್ಜರಿಯಾಗಿ ಸುರಿದ ಮಳೆಯಿಂದಾಗಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ರೈತರ ಬದುಕು ಸಂಪೂರ್ಣ ಹಾಳಾಗಿದೆ. ಭಾರಿ ಗಾಳಿ, ಮಳೆಗೆ ಬಾಳೆತೋಟ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ.
ಸುಮಾರು 500ಕ್ಕಿಂತ ಹೆಚ್ಚು ಬಾಳೆಗಿಡ ನೆಲಕ್ಕೆ ಉರುಳು ಬಿದ್ದ ನಾಶವಾಗಿದ್ದು ಲಕ್ಷಾಂತರ ರೂಪಾಯಿ ಹಾಳಾಗಿದೆ. ಗ್ರಾಮದ ರೇವಣ್ಣಪ್ಪ ಕಂಭಾವಿ, ಮಡಿವಾಳಪ್ಪ ಕಂಭಾವಿ ಸೇರಿದಂತೆ 6ಕ್ಕೂ ಹೆಚ್ಚು ರೈತರ ಬೆಳೆ ನೆಲದ ಪಾಲಾಗಿದೆ. ಇದ್ರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ.
ಇನ್ನು ಇದೆ ವೇಳೆ ಎಮ್ಮೆಯೊಂದು ಸಾವನ್ನಪ್ಪಿದೆ. ಹೀಗಾಗಿ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡುವಂತೆ ರೈತರ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.