ಆರ್ ಟಿಓ ಕಚೇರಿ ಉದ್ಘಾಟಿಸಿದ ಡಿಸಿಎಂ

430

ಪ್ರಜಾಸ್ತ್ರ ಸುದ್ದಿ

ಅಥಣಿ: ಪಟ್ಟಣದಲ್ಲಿ ಬಹಳ ದಿನಗಳ ಬೇಡಿಕೆಯಾಗಿದ್ದ ಆರ್ ಟ.ಓ ಕಛೇರಿಯನ್ನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಿದ್ರು. ಈ ವೇಳೆ ಸಚಿವ ಶ್ರೀಮಂತ ಪಾಟೀಲ ಮತ್ತು ಕೋಳಗೇರಿ ನಿಗಮದ ಅಧ್ಯಕ್ಷ ಶಾಸಕ ಮಹೇಶ ಕುಮಟಳ್ಳಿ ಅವರು ಸಾಥ್ ನೀಡಿದ್ರು.

ಈ ವೇಳೆ ಮಾತ್ನಾಡಿದ ಡಿಸಿಎಂ, ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಆರ್ ಟಿಓ ಕಚೇರಿಯನ್ನ ಇಂದು ಉದ್ಘಾಟಿಸಲಾಗಿದೆ. ಇಷ್ಟು ದಿನಗಳ ಕಾಲ ದೂರದ ಚಿಕ್ಕೋಡಿಗೆ ತೇರಳಬೇಕಾಗಿತ್ತು. ಇನ್ಮುಂದೆ ಎಲ್ಲ ಕೆಲಸಗಳು ಇಲ್ಲಿಯೇ ಆಗುತ್ತಿವೆ ಎಂದರು.

ಈ ವೇಳೆ ಅಥಣಿಯ ಶಿವಬಸವ ಮಹಾಸ್ವಾಮಿಗಳು, ಮರುಳಸಿದ್ದ ಸ್ವಾಮಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಮುಖಂಡರುಗಳು ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!