ದೇವರಹಿಪ್ಪರಗಿಯಲ್ಲಿ ಶವ ಮರುಪರೀಕ್ಷೆ

462

ವಿಜಯಪುರ/ದೇವರಹಿಪ್ಪರಗಿ: ಅಂತ್ಯಸಂಸ್ಕಾರ ಮಾಡಿದ್ದ ಶವನ್ನ ಹೊರ ತೆಗೆದು ಮರು ಪರೀಕ್ಷೆ ನಡೆಸಲಾಗಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದಲ್ಲಿ ಹೂತ ಶವವನ್ನ ಹೊರತೆಗೆದು ಮರು ಪರೀಕ್ಷೆ ಮಾಡಲಾಗಿದೆ.

ಕಳೆದ ಮೇ 7 ರಿಂದ 10ರ ದಿನಾಂಕದ ನಡುವಿನಲ್ಲಿ ಪಟ್ಟಣದ 18 ವರ್ಷದ ತೌಫಿಕ್ ಮಕಾಂದರ್ ಅನ್ನೋ ಯುವಕ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ. ಅದನ್ನ ಕೊಲೆ ಎನ್ನಲಾಗ್ತಿದ್ದು, ಹೀಗಾಗಿ ಶವವನ್ನ ಹೊರ ತೆಗೆದು ಮರು ಪರೀಕ್ಷೆ ನಡೆಸಲಾಗಿದೆ.

ಮೃತ ತೌಫಿಕ್ ಅನ್ನೋ ಹುಡ್ಗ ಇದೇ ಊರಿನ ಹುಡುಗಿಯೊಬ್ಬಳನ್ನ ಚೋಡಾಯಿಸ್ತಿದ್ದನಂತೆ. ಹೀಗಾಗಿ ಹುಡ್ಗಿಯ ತಂದೆ ಹಾಗೂ ಸಂಬಂಧಿಕರು ಮಗನಿಗೆ ಜೀವ ಬೆದರಿಕೆ ಹಾಕಿದ್ರು ಅಂತಾ ಆತನ ಪೋಷಕರು ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಅಲ್ದೇ ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸಿಲ್ಲ ಅಂತಾ ಹೇಳಿ ಮೇಲಾಧಿಕಾರಿಗಳಿಗೂ ದೂರು ನೀಡಲಾಗಿತ್ತು.

ತೌಫಿಕ್ ಶವ ಪರೀಕ್ಷೆ ನಡೆಸಬೇಕು ಹಾಗೂ ಸಿಐಡಿ ತನಿಖೆಗೆ ಆದೇಶಿಸಬೇಕೆಂದು ಗೃಹ ಸಚಿವರಿಗೂ ಮನವಿ ಸಲ್ಲಿಸಿದ್ದರು. ಪೊಲೀಸ್ ಮಹಾನಿರ್ದೇಶಕರು, ಸಿಐಡಿ ವಿಶೇಷ ಘಟಕ ವಿಜಯಪುರ ಪೊಲೀಸ್ ಅಧೀಕ್ಷಕರಿಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ರು. ಹೀಗಾಗಿ ಇಂದು ಶವ ಮರು ಪರೀಕ್ಷೆ ಮಾಡಲಾಯಿತು. ಈ ವೇಳೆ ತಹಶೀಲ್ದಾರ್, ತಾಲೂಕು ಅಧಿಕಾರಿಗಳ ತಂಡದ ಸಮಕ್ಷಮದಲ್ಲಿ ಪಂಚನಾಮ ನಡೆಸಲಾಯ್ತು.




Leave a Reply

Your email address will not be published. Required fields are marked *

error: Content is protected !!