ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕುರಿತು, ಒಂದಲ್ಲ ಒಂದು ಸಂಶಯ, ಅನುಮಾನ ಮೂಡ್ತಿದೆ. ಹೀಗಾಗಿ ಹಲವರು ಹಲವು ರೀತಿಯಿಂದ ಮಾತ್ನಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ರಾ ಮಾಜಿ ಅಧಿಕಾರಿಯೊಬ್ಬರು, ಇದರ ಹಿಂದೆ ದಾವೂದ್ ಇಬ್ರಾಹಿಂ ಸಹಚರರ ಕೈವಾಡವಿದೆ ಎಂದಿದ್ರು.
ಈಗ ಸುಶಾಂತ ಸಾವಿನ ಕುರಿತು ಸಿಬಿಐ ತನಿಖೆಯಾಗ್ಲಿ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಕೆಲ ಮೂಲಗಳ ಪ್ರಕಾರ, ಮಹಾರಾಷ್ಟ್ರ ಪೊಲೀಸರ ಮೂಲಕ ಕೇಸ್ ಮುಚ್ಚಿ ಹಾಕಲು ಬಾಲಿವುಡ್ ಪ್ರಖ್ಯಾತರು ಪ್ರಯತ್ನಸ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಇದನ್ನ ಸಿಬಿಐ ತನಿಖೆಗೆ ಒಪ್ಪಿಸಬೇಕು ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.