ಆಕೆ ಉಗ್ರರು ಅಂದ್ಳು.. ಈತ ಉಗ್ರರ ತಾಣ ಎಂದ..

409

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣೌತ್ ಒಂದಲ್ಲ ಒಂದು ವಿವಾದಾತ್ಮ ಹೇಳಿಕೆ ನೀಡುತ್ತಲೇ ಬರ್ತಿದ್ದಾಳೆ. ನಟ ಸುಶಾಂತ ಸಿಂಗ್ ರಾಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನಾಡ್ತಿರುವ ಕಂಗನಾ, ಸಾಕಷ್ಟು ವಿವಾದದ ಕಿಡಿ ಹೊತ್ತಿಸಿದ್ಳು. ಮುಂಬೈನ್ನು ಪಾಕ್ ಆಕ್ರಮಿತ ಕಾಶ್ಮೀರ ಅಂದ್ರು. ಬಳಿಕ ರೈತಪರ ಹೋರಾಟಗಾರರನ್ನ ಉಗ್ರರಿಗೆ ಹೋಲಿಸಿದ್ರು.

ಇದೀಗ ಸಂಸದ ತೇಜಸ್ವಿ ಸೂರ್ಯ ಬೆಂಗಳೂರನ್ನ ಉಗ್ರರ ತಾಣವಾಗಿದೆ. ಇಲ್ಲಿ ರಾಷ್ಟ್ರೀಯ ತನಿಖಾ ದಳ ಶಾಶ್ವತ ಕಚೇರಿ ಸ್ಥಾಪನೆ ಮಾಡುವುದ್ರಿಂದ ಇದನ್ನ ಮಟ್ಟ ಹಾಕಬಹುದು ಎಂದು ಹೇಳಿದ್ದಾರೆ. ಯುವ ಸಂಸದನ ಹೇಳಿಕೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ಸಲೀಂ ಅಹ್ಮದ, ಜೆಡಿಎಸ್ ನ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕಿಡಿ ಕಾರಿದ್ದಾರೆ. ಕೂಡಲೇ ತೇಜಸ್ವಿ ಸೂರ್ಯ ಕ್ಷಮೆ ಕೇಳಬೇಕು ಎಂದಿದ್ದಾರೆ. ಆದ್ರೆ, ಬಿಜೆಪಿ ನಾಯಕರು ಹಾಗೂ ಬಿಜೆಪಿ ಬೆಂಬಲಿತ ಕೆಲವರು ಬಾಯಿಗೆ ಬಂದಂತೆ ಮಾತ್ನಾಡ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.




Leave a Reply

Your email address will not be published. Required fields are marked *

error: Content is protected !!