ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಹೊರವಲಯದ ಕಲಬುರಗಿ-ವಿಜಯಪುರ ಹೆದ್ದಾರಿಯ ಯರಗಲ್ಲ ರಸ್ತೆಯಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮಹಾಂತೇಶ ನಾವಿ(25), ಸದ್ದಾಮಹುಸೇನ ನಾಯ್ಕೋಡಿ(25) ಹಾಗೂ ಮಂಜುನಾಥ ದೊಡಮನಿ(24) ಅನ್ನೋ ಮೂವರು ಯುವಕರ ಮೃತಪಟ್ಟಿದ್ದಾರೆ. ಸದ್ದಾಮಹುಸೇನ ಹಾಗೂ ಮುಂಜುನಾಥ ದೇವರ ಹಿಪ್ಪರಗಿ ತಾಲೂಕಿನವರಾಗಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.