ಸಿಂದಗಿಯಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ

205

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಹೊರವಲಯದ ಕಲಬುರಗಿ-ವಿಜಯಪುರ ಹೆದ್ದಾರಿಯ ಯರಗಲ್ಲ ರಸ್ತೆಯಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮಹಾಂತೇಶ ನಾವಿ(25), ಸದ್ದಾಮಹುಸೇನ ನಾಯ್ಕೋಡಿ(25) ಹಾಗೂ ಮಂಜುನಾಥ ದೊಡಮನಿ(24) ಅನ್ನೋ ಮೂವರು ಯುವಕರ ಮೃತಪಟ್ಟಿದ್ದಾರೆ. ಸದ್ದಾಮಹುಸೇನ ಹಾಗೂ ಮುಂಜುನಾಥ ದೇವರ ಹಿಪ್ಪರಗಿ ತಾಲೂಕಿನವರಾಗಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!