ಪಠ್ಯದಿಂದ ಟಿಪ್ಪು ಹೊರಗೆ!

312

ಬೆಂಗಳೂರು: ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತು ಯಾವುದೇ ರೀತಿಯ ಪಾಠ ಇರುವುದಿಲ್ಲವೆಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ.

ಮಾಧ್ಯಮ ಸಂವಾದದಲ್ಲಿ ಮಾತ್ನಾಡಿದ ಅವರು, ಟಿಪ್ಪುನ ಕುರಿತಾದ ಯಾವುದೇ ವಿಷಯವನ್ನ ಪಠ್ಯದಲ್ಲಿ ಇರುವುದಕ್ಕೆ ಬಿಡುವುದಿಲ್ಲ. ಟಿಪ್ಪು ಸ್ವತಂತ್ರ ಹೋರಾಟಗಾರನಲ್ಲ. ಆದ್ರೆ, ಪಠ್ಯ ಪುಸ್ತಕದಲ್ಲಿ ಸ್ವತಂತ್ರ ಹೋರಾಟಗಾರನೆಂದು ವೈಭವಿಕರಿಸಲಾಗಿದೆ ಅಂತಾ ಹೇಳಿದ್ದಾರಂತೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಸಿಎಂ ಬರೆದಿರುವ ಪತ್ರದಲ್ಲಿ, ಟಿಪ್ಪು ಫ್ರೆಂಚ್ ರೊಂದಿಗೆ ಕೈ ಜೋಡಿಸಿದ್ದ. ಸಾಮ್ರಾಜ್ಯ ವಿಸ್ತರಣೆ ಮಾಡಿಕೊಳ್ಳಲು ಫ್ರೆಂಚ್ ರ ಸಹಾಯ ಪಡೆಯುತ್ತಿದ್ದ. ಹಿಂದೂ ಮತ್ತು ಕ್ರಿಶ್ಚಿಯನ್ ವಿರೋಧಿಯಾಗಿದ್ದ ಅನ್ನೋ ಅಂಶಗಳಿವೆಯಂತೆ.




Leave a Reply

Your email address will not be published. Required fields are marked *

error: Content is protected !!