ವಾರಣಾಸಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಮೋದಿ ಇಂದು ವಾರಣಾಸಿಗೆ ಭೇಟಿ ನೀಡ್ತಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಗೆ ಪ್ರಧಾನಿ ಭೇಟಿ ನೀಡ್ತಿರುವ ಹಿನ್ನೆಲೆಯಲ್ಲಿ ಇಡೀ ನಗರವನ್ನ ಶೃಂಗರಿಸಲಾಗಿದೆ. ಬಿಜೆಪಿ ಬಾವುಟ, ಬ್ಯಾನರ್, ಬಲೂನ್ ಹಾಗೂ ಬುದ್ಧ ಸೇರಿದಂತೆ ಅನೇಕ ಅಧ್ಯಾತ್ಮಿಕ ಶ್ರೇಷ್ಠರ ಮೂರ್ತಿಗಳನ್ನ ರೆಡಿ ಮಾಡಲಾಗಿದೆ.
ಮೋದಿ ಐದು ಕಿಲೋ ಮೀಟರ್ ಉದ್ದದ ರ್ಯಾಲಿ ನಡೆಸಲಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ಥಳೀಯ ನಾಯಕರು ಹಾಗೂ ಆಡಳಿತಾಧಿಕಾರಿಗಳ ಜೊತೆ ಸಭೆ ನಡೆಸಿ, ಸಕಲ ಸಿದ್ಧತೆಗಳನ್ನ ಮಾಡಿದ್ದಾರೆ. ಮೊದಲು ಕಾಶಿ ವಿಶ್ವನಾಥನ ದರ್ಶನ, ಪೂಜೆ ಮಾಡಲಿದ್ದಾರೆ. ನಂತರ ರೋಡ್ ಶೋ ನಡೆಸುವ ಮೂಲಕ ತಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಧನ್ಯವಾದಗಳನ್ನ ಮೋದಿ ಸಲ್ಲಿಸಲಿದ್ದಾರೆ.