ಸರಣಿ ಅಪಘಾತ: ಓರ್ವ ಸಾವು, ಮೂವರಿಗೆ ಗಾಯ

160

ಪ್ರಜಾಸ್ತ್ರ ಸುದ್ದಿ

ಹಿರೇಬಾಗೇವಾಡಿ: ಟ್ರಕ್, ಟ್ರ್ಯಾಕ್ಟರ್ ಹಾಗೂ ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ. ತಾಲೂಕಿನ ಎನ್ಎಚ್-4 ರಸ್ತೆಯ ಬಡೆಕೊಳ್ಳಿಮಠ ಹತ್ತಿರ ಭಾನುವಾರ ಸಂಭವಿಸಿದೆ.

ಬೆಳಗಾವಿಯಿಂದ ಧಾರವಾಡ ಕಡೆ ಹೊರಟಿದ್ದ ಟ್ರಕ್, ಅತಿ ವೇಗವಾಗಿ ಬಂದು ಮುಂದೆ ಹೊರಟಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಅಲ್ಲದೇ ಎರಡು ಬೈಕ್ ಗಳಿಗೆ ಸಹ ಡಿಕ್ಕಿಯಾಗಿದೆ. ಇದರ ಪರಿಣಾಮ ಕಿತ್ತೂರು ತಾಲೂಕಿನ ಹೊಸಹುಣಶೀಕಟ್ಟಿಯ ಮೆಹಬೂಬ್ ಸುಬಾನಿ ಮುಗಟಸಾಬ್ ಮೃತಪಟ್ಟಿದ್ದಾರೆ. ಬಸವಾಪುರದ ಪ್ರಜ್ವಲ್ ಗಣೇಶ್, ಶಿವಾನಂದ ಕಲ್ಲೂರ ಗಾಯಗೊಂಡಿದ್ದಾರೆ.

ಟ್ರಕ್ ಡ್ರೈವರ್ ಜಾಫರ್ ಸಾಧಿಕ್ ಮುನೀರ್ ಅಹ್ಮದ್ ಜಬ್ರೇಜ್ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅತಿವೇಗ ಹಾಗೂ ಅಜಾಗುರಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಜೀವ ಹಾನಿ ಮಾಡಿದ್ದಾರೆ ಎಂದು ಮೃತ ಮೆಹಬೂಬ್ ಸಹೋದರ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಟ್ರಕ್ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್ ಹಾಗೂ ಬೈಕ್ ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.




Leave a Reply

Your email address will not be published. Required fields are marked *

error: Content is protected !!