ಷರತ್ತಿಲ್ಲದ ಗ್ಯಾರೆಂಟಿ ಘೋಷಿಸಿದ್ದು ಯಾರು: ಹೆಚ್ಡಿಕೆ

87

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅಧಿಕಾರದಲ್ಲಿ ಇದ್ದಾಗ ಬಿಜೆಪಿ ವಿದ್ಯುತ್ ದರ ಏರಿಕೆಗೆ ಅರ್ಜಿ ಹಾಕಿರಲಿಲ್ಲವೇ? ಯಾವ ಪುರುಷಾರ್ಥಕ್ಕೆ ಧರಣಿ ಮಾಡಿದೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚುನಾವಣೆಪೂರ್ವದಲ್ಲಿ ಷರತ್ತಿಲ್ಲದ ಗ್ಯಾರೆಂಟಿ ಘೋಷಿಸಿದ್ದು ಯಾರು? ಚುನಾವಣೆಪೂರ್ವದಲ್ಲಿ 200 ಯುನಿಟ್ ವಿದ್ಯುತ್ ಉಚಿತ ಅಂದವರು ನೀವು. ಒಂದು ಮಹಡಿಯಲ್ಲಿ ಮೂರು ಮನೆಗಳಿರುತ್ತವೆ. ಒಂದು ಮೀಟರ್ ಇರುತ್ತೆ. ಆಗ ಅವರು ಏನು ಮಾಡಬೇಕು. ಬಾಡಿಗೆದಾರರಿಗೆ, ಹೊಸ ಮನೆ ಕಟ್ಟಿದವರಿಗೆ ಉಚಿತ ವಿದ್ಯುತ್ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಉಪ ಮುಖ್ಯಮಂತ್ರಿಗಳು ಸ್ನೇಹಕ್ಕೂ ಸಿದ್ಧ, ಯುದ್ಧ ಮಾಡಲು ಸಿದ್ಧ ಎಂದಿದ್ದಾರೆ. ನಾವು ಜನಪರ ಹೋರಾಟ ಮಾಡುತ್ತೇವೆ ಅಂತಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ. ನನಗೇನು ಅವಸರವಿಲ್ಲ. ಎಲ್ಲವನ್ನು ಮುಂದೆ ಚರ್ಚಿಸುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಎಚ್ಚರಿಕೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!