ವಿಧುವೆಯರು, ವಿಚ್ಛೇದಿತರೆ ಇವನ ಟಾರ್ಗೆಟ್.. ಕೊನೆಗೂ ಸಿಕ್ಕಿಬಿದ್ದ ಟೋಪಿವಾಲಾ

418

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರ್ತಾರೆ ಅನ್ನೋ ಮಾತು ಹೇಳಿ ಹೇಳಿ ಸಾಕಾಗಿದೆ. ಆದ್ರೂ, ಜನ ಮೋಸ ಹೋಗ್ತಾರೆ. ಹೀಗಾಗಿಯೇ ಈ ಭೂಪ ವಧು-ವರ ಅನ್ವೇಷಣೆ ವೆಬ್ ಸೈಟ್ ಮೂಲಕ, ವಿಧುವೆಯರನ್ನ, ವಿಚ್ಛೇದಿತರನ್ನ ಸಂಪರ್ಕ ಮಾಡಿ ಮೋಸ ಮಾಡ್ತಿದ್ದವನ ಬಂಧನವಾಗಿದೆ.

ಪಟ್ಟೆಗಾರಪಾಳ್ಯದ 35 ವರ್ಷದ ಸುರೇಶ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿದ್ದ ದುಬಾರಿ ಕಾರು, ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.

ಹೇಗೆ ಮೋಸ ಮಾಡ್ತಿದ್ದ

ಚಾಲಾಕಿ ಸುರೇಶ, ವಧು-ವರ ಅನ್ವೇಷಣೆ ವೆಬ್ ಸೈಟ್ ಮೂಲಕ, ವಿಧುವೆಯರು, ಡಿವೋರ್ಸ್ ಪಡೆದು ಮತ್ತೊಂದು ಮದ್ವೆಗೆ ರೆಡಿಯಿರುವ ಬಗ್ಗೆ ಪ್ರೊಫೈಲ್ ಅಪ್ಲೋಡ್ ಮಾಡಿರ್ತಾರೆ. ಇಂತವರನ್ನ ಟಾರ್ಗೆಟ್ ಮಾಡಿದ್ದ. ಅವರ ಬಳಿ ತಾನೊಬ್ಬ ಅನಾಥ ಎಂದು ಕಥೆ ಕಟ್ಟುತ್ತಿದ್ದ. ನಂತರ ಮದ್ವೆಯಾಗುವುದಾಗಿ ಹೇಳುತ್ತಿದ್ದ. ಬಳಿಕ ಅವರಿಂದ ನಿವೇಶನ ಪಡೆಯುವುದಕ್ಕೆ ಹಣ ಬೇಕಿದೆ ಎಂದು ಹೇಳಿ, ಹಣ, ಚಿನ್ನಾಭರಣ ಪಡೆಯುತ್ತಿದ್ದ.

ಅದಾಗ್ಲೇ 4 ಮಂದಿಯನ್ನ ಮದ್ವೆಯಾಗಿದ್ದಾನೆ. ಮೋಸ ಹೋದ ಮಹಿಳೆ ನೀಡಿದ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸ್ರು, ಕಿಲಾಡಿ ಸುರೇಶನನ್ನ ಬಂಧಿಸಿದ್ದಾರೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಮೂಲದ ಸುಮಾರು 11 ಜನ ಮಹಿಳೆಯರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಇನ್ನು ಹೆಚ್ಚಿನ ತನಿಖೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!