ಪ್ರಜಾಸ್ತ್ರ ಸುದ್ದಿ
ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾ ಸ್ಟಾರ್ ಗಳಿಗೆ ಕೆಲವರು ಕಟ್ಟಾ ಅಭಿಮಾನಿಗಳು ಇರ್ತಾರೆ. ಅವರಿಗೆ ಒಂದಿಷ್ಟು ನೋವು ಆದರೂ ಸಹಿಸಿಕೊಳ್ಳಲ್ಲ. ಅಂತವರು ಎಲ್ಲದಕ್ಕೂ ಸಿದ್ಧವಿರ್ತಾರೆ. ಹೀಗಾಗಿಯೇ ಅನಾಹುತುಗಳು ನಡೆಯುತ್ತವೆ. ಸೋಮವಾರ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮನನೊಂದು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ರಾಜಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ರಾಜಕಾರಣದಲ್ಲಿ ಏರಿಳಿತ ಸಹಜ. ಇದಕ್ಕೆ ಪ್ರಾರ್ಣಾಪಣೆ ಮಾಡಿಕೊಳ್ಳುವುದು ಸರ್ವಥಾ ಒಪ್ಪಿಕೊಳ್ಳಲಾಗುವುದು. ರಾಜಪ್ಪ ಆತ್ಮಹತ್ಯೆ ತುಂಬಾ ನೋವು ತಂದಿದೆ. ಅವರ ಕುಟುಂಬದೊಂದಿಗೆ ನಾನು ಇರುವುದಾಗಿ ತಿಳಿಸಿದ್ದಾರೆ.