ಕೃಷಿಹೊಂಡದಲ್ಲಿ ಮುಳುಗಿ 3 ಮಕ್ಕಳ ಸಾವು

365

ಪ್ರಜಾಸ್ತ್ರ ಸುದ್ದಿ

ಪಾಂಡವಪುರ: ಈಜಲು ಹೋದ ಮೂವರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಳ್ಳೇಅತ್ತೆಗುಪ್ಪೆ ಗ್ರಾಮದಲ್ಲಿ ನಡೆದಿದೆ. ಮಹದೇವ ಎಂಬುವರ ಮಕ್ಕಳಾದ ಚಂದನ, ಕಾರ್ತಿಕ ಹಾಗೂ ಮಲ್ಲಿಕಾರ್ಜುನ ಎಂಬುವರ ಮಗ ರೀತೇಶ ಸಾವನ್ನಪ್ಪಿದ್ದಾರೆ.

ಶಾಲೆಗೆ ರಜೆ ಇರುವುದ್ರಿಂದ ಮಕ್ಕಳು ಗುರುವಾರ ಮಧ್ಯಾಹ್ನ ಈಜಲು ಬಳ್ಳೇಅತ್ತೆಗುಪ್ಪೆ ಹೊರವಲಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ಬಂದು ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!