ಪ್ರಜಾಸ್ತ್ರ ಸುದ್ದಿ
ಉತ್ತರ ಪ್ರದೇಶ: ಇಡೀ ದೇಶದಲ್ಲಿ ಕರೋನಾ ಕಾರ್ಮೋಡ ಆವರಿಸಿಕೊಂಡಿದೆ. ಸಾವು, ನೋವುಗಳನ್ನ ಕೇಳುವವರಿಲ್ಲ. ಇದರ ನಡುವೆಯೂ ಜನಪ್ರತಿನಿಧಿಗಳು ರಾಜಕೀಯ ಮಾಡ್ತಿದ್ದಾರೆ. ಕೆಲವರು ಹಣ ಮಾಡಿಕೊಳ್ಳಲು ನೋಡ್ತಿದ್ದಾರೆ. ಮತ್ತೊಂದು ಕಡೆ ಕಳ್ಳರು ಹೆಣದ ಮೇಲಿನ ಬಟ್ಟೆಯನ್ನೂ ಸಹ ಬಿಡ್ತಿಲ್ಲ.
ಶವಗಳ ಮೇಲಿನ ಬಟ್ಟೆ, ಆಭರಣ, ಮತ್ತಿತರ ವಸ್ತುಗಳನ್ನ ಕಳ್ಳತನ ಮಾಡ್ತಿದ್ದ 7 ಜನರನ್ನ ಉತ್ತರ ಪ್ರದೇಶದ ಭಾಗಪೇಟ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸ್ಮಾಶನಗಳಿಗೆ ಹೋಗ್ತಿದ್ದ ಈ ತಂಡ ಇಂತಹ ನೀಚ ಕೆಲಸ ಮಾಡ್ತಿರುವುದನ್ನ ಒಪ್ಪಿಕೊಂಡಿದೆ.
ಬಂದಿತರಿಂದ 520 ಬೆಡ್ ಶೀಟ್, 127 ಕುರ್ತಾ, 52 ಸೀರೆ ಸೇರಿದಂತೆ ಇತರೆ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಷ್ಟೊಂದು ಕೆಟ್ಟ ಮನಸ್ಸುಗಳು ಇರ್ತವೆ ಅನ್ನೋದೇ ದುರಂತ.