ಪ್ರಜಾಸ್ತ್ರ ಸುದ್ದಿ
ವಿಜಯಪುರ: ಎಲ್ಲೆಡೆ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಗ್ತಿದೆ. ಜಿಲ್ಲೆಯ ಸಿಂದಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಆಚರಿಸಲಾಯ್ತು.
ಸಿಂದಗಿಯಲ್ಲಿ ಶಾಸಕರಿಲ್ಲದ ಕಾರಣ ತಹಶ್ಲೀದಾರ್ ನಿಂಗಣ್ಣ ಬಿರಾದರ ಅವರು ಧ್ವಜಾರೋಹಣ ನೆರವೇರಿಸಿದ್ರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಅರುಣ ಶಾಹಾಪೂರ, ನಿಂಬಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸೇರಿ ಅನೇಕರು ಭಾಗವಹಿಸಿದ್ರು.
ಈ ವೇಳೆ ಕರೋನಾ ವಾರಿಯರ್ಸ್ ಗಳಿಗೆ ತಾಲೂಕು ಆಡಳಿತ ಇಲಾಖೆಯಿಂದ ಗೌರವಿಸಲಾಯ್ತು.