ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ರಾಜಕೀಯ ಪಕ್ಷಗಳಿಂದ ಆಮಿಷಗಳು ಜೋರಾಗಿವೆ. ಚುನಾವಣೆ ನೀತಿ ಸಂಹಿತೆಗೂ ಮೊದಲೇ ತಮ್ಮ ಮತಬೇಟಿ ನಡೆಸಲು ಉಡುಗೊರೆ, ಹಣ ಹಂಚಿಕೆ ಕೆಲಸ ನಡೆದಿದೆ. ಇದಕ್ಕೆ ಕಡಿವಾಣ ಹಾಕಲು ಈಗಾಗ್ಲೇ ಚುನಾವಣಾ ಆಯೋಗ ಸೂಚಿಸಿದೆ.
ನೀತಿ ಸಂಹಿತೆಗಾಗಿ ಕಾಯಬೇಡಿ ಎಂದು ಅಧಿಕಾರಿಗಳು ಹೇಳಿದ್ದರಿಂದ ಗಡಿ ಭಾಗಗಳು ಸೇರಿ ಎಲ್ಲೆಡೆ ತಪಾಸಣೆ ನಡೆದಿದೆ. ಇದರಿಂದಾಗಿ ಕಳೆದ 2 ದಿನಗಳಲ್ಲಿ ಬರೋಬ್ಬರಿ 9.19 ಕೋಟಿ ಅಕ್ರಮ ಹಣ ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಜಾರಿಯಾಗುವ ಮೊದಲೇ ತಮ್ಮ ಆಟವನ್ನು ರಾಜಕಾರಣಿಗಳು ನಡೆಸಿದ್ದಾರೆ.
ದೊಡ್ಡ ಮಟ್ಟದ ಹಣದ ವಹಿವಾಟು, ಭರ್ಜರಿ ಗಿಫ್ಟ್ ಗಳನ್ನು ನೀಡಲು ದೊಡ್ಡ ಮಟ್ಟದಲ್ಲಿ ಖರೀದಿಸಿ ಹಂಚಿಕೆ ಮಾಡಲಾಗುತ್ತಿದೆ. ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲೆಡೆ ತಪಾಸಣೆ ಜೋರಾಗಿದೆ. ಸಂಜೆ 5ಗಂಟೆಯಿಂದ ಮುಂಜಾನೆ 10ಗಂಟೆಯ ತನಕ ಎಟಿಎಂಗಳಿಗೂ ಸಹ ಹಣ ತುಂಬುವುದನ್ನು ನಿರ್ಬಂಧಿಸಲಾಗಿದೆ.