ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎಂಟು ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸತಾರಾ ಬಳಿ ನಿನ್ನೆ ತಡರಾತ್ರಿ ನಡೆದಿದೆ. ಮೃತಪಟ್ಟವರು ಧಾರವಾಡದ ಮೆಹಬೂಬ್ ನಗರದ ನಿವಾಸಿಗಳಾಗಿದ್ದಾರೆಂದು ತಿಳಿದು ಬಂದಿದೆ.
70 ವರ್ಷದ ನಿಜಾಮುದ್ದೀನ್ ಅಬ್ದುಲ್ನಬಿ ಸೌದಾಗರ, 60 ವರ್ಷದ ಪತ್ನಿ ಸಪೂರಾ ಬೇಗಂ, 40 ವರ್ಷದ ಮಗ ನಶ್ರುಪ್ ಅಲಿ, 35 ವರ್ಷದ ಸೊಸೆ ನಫೀಜಾ ಬೇಗಂ,ಇವರ ಮಗಳಾದ 6 ವರ್ಷದ ಮಗಳು ಅಕ್ಷಾ ಗುಲ್ಲಾರ, 4 ವರ್ಷದ ತಾಯಿಬಾ, 2 ವರ್ಷದ ಮಗ ಮಹಮ್ಮದ್ ಅಹ್ಮದ್ರಜಾ ಹಾಗೂ 30 ವರ್ಷದ ಡ್ರೈವರ್ ಸೆಹಬಾಗ್ ಎಂದು ತಿಳಿದು ಬಂದಿದೆ.
ನಿಜಾಮುದ್ದೀನ್ ಸೌದಾಗರ ಹಾಗೂ ಪತ್ನಿ ಸಪೂರಾ ಬೇಗಂ ಹಜ್ ಯಾತ್ರೆಗೆ ತೆರಳಲು ನಿನ್ನೆ ರಾತ್ರಿ ಮುಂಬೈನತ್ತ ಪ್ರಯಾಣಿಸುತ್ತಿದ್ದಾಗ ಸತಾರಾ ಸಮೀಪ ಈ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನಿಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.