ಸಂಚಾರಿ ವಿಜಯ ಹೆಸರಲ್ಲಿ ರಾಜ್ಯ ಪ್ರಶಸ್ತಿಗೆ ಮನವಿ

229

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಬೈಕ್ ಅಪಘಾತದಿಂದಾಗಿ ಇತ್ತೀಚೆಗೆ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ದಿ ಸಂಚಾರಿ ವಿಜಯ ಅವರ ಹೆಸರಿನಲ್ಲಿ, ರಾಜ್ಯ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ ಆರ್.ವೆಂಕಟರಾಜು ಮನವಿ ಮಾಡಿಕೊಂಡಿದ್ದಾರೆ.

ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದು ರಾಷ್ಟ್ರಪಶಸ್ತಿ ಪಡೆದವರು. ಇದರ ಜೊತೆಗೆ ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರ್ತಿದ್ರು. ಅವರ ಸಾವಿನಲ್ಲಿಯೂ ಅಂಗಾಂಗ ದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆಯಲಾಗಿದೆ. ಹೀಗಾಗಿ ಮೊದಲ ಚಿತ್ರ ನಿರ್ದೇಶನ ಮಾಡುವ ನಿರ್ದೇಶಕರಿಂದ ಹಿಡಿದು ತಂತ್ರಜ್ಞರು, ನಟ, ನಟಿ, ಖಳನಾಯಕ, ಹಾಸ್ಯ ಕಲಾವಿದ, ಪೋಷಕ ನಟ ಸೇರಿದಂತೆ ಯಾವುದೇ ಪ್ರಕಾರದ ಕಲಾವಿದರಿಗೆ ಸಂಚಾರಿ ವಿಜಯ ರಾಜ್ಯ ಪ್ರಶಸ್ತಿ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಪ್ರತಿಭೆಯಿಂದ ರಾಷ್ಟ್ರ ಪಶಸ್ತಿ ಪಡೆದಿದ್ದಾರೆ. ಹಲವರಿಗೆ ಮಾದರಿಯಾಗಿದ್ದಾರೆ. ಪ್ರಶಸ್ತಿಯ ಮೂಲಕ ಅವರ ಹೆಸರನ್ನ ಚಿತಸ್ಥಾಯಿಯಾಗಿರುವಂತೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!