ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸ್ಥಳ ಗುರುತು

426

ಲಕ್ನೋ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ 5 ಕಡೆ ಸ್ಥಳಗಳನ್ನ ಗುರುತಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸ್ಥಳ ಗುರುತಿಸಿದೆ.

ಶಂಶುದ್ದೀನ್ ಪುರ, ಚಾಂದ್ ಪುರ, ಮಾರ್ಜಾಪುರದಲ್ಲಿ ಐದು ಕಡೆ ಸ್ಥಳಗಳನ್ನ ಗುರುತು ಮಾಡಿದೆ. ಸುಪ್ರೀಂ ಆದೇಶದಂತೆ ಸುನ್ನಿ ವಕ್ಫ್ ಬೋರ್ಡ್ ಸ್ಥಳಗಳನ್ನ ನೋಡಿ ಇವುಗಳಲ್ಲಿ ಯಾವುದು ಮಸೀದಿ ನಿರ್ಮಾಣಕ್ಕೆ ಸೂಕ್ತವೆಂದು ತಿಳಿಸಲಿ ಅಂತಾ ಸರ್ಕಾರ ಹೇಳಿದೆ.

ಅಯೋಧ್ಯೆಯದಲ್ಲಿನ ರಾಮಮಂದಿರ ಹಾಗೂ ಬಾಬರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ಡಿಸೆಂಬರ್ 12ರಂದು ತೀರ್ಪು ನೀಡಿತ್ತು. ಅದರಂತೆ ಮಸೀದಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ ಸ್ಥಳ ಪರಿಶೀಲನೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!