100 ಡೇಸ್ ಕಂಪ್ಲೀಟ್: ಕಿರುಪುಸ್ತಕ ಬಿಡುಗಡೆ

347

ಬೆಂಗಳೂರು: ಬಿಜೆಪಿ ಸರ್ಕಾರ ನೂರು ದಿನ ಕಂಪ್ಲೀಟ್ ಮಾಡಿರುವ ಹಿನ್ನೆಲೆಯಲ್ಲಿ ‘ನೂರು ದಿನ ನೂರಾರು ಸಾಧನೆ’ ಅನ್ನೋ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸಲಾಯ್ತು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯ್ತು.

ಪ್ರವಾಹ ಸಂತ್ರಸ್ತರಿಗೆ ನೀಡಿದ ನೆರವು, ಲೋಕೋಪಯೋಗಿ ಇಲಾಖೆಯಿಂದ 1,738 ಕಾಮಗಾರಿಗಳಿಗೆ 750 ಕೋಟಿ ಬಿಡುಗಡೆ, 178 ಸೇತುವೆ ಪೈಕಿ 142 ರಸ್ತೆ, ಸೇತುವೆ ಸಂಪರ್ಕಗಳ ಪುನರ್ ನಿರ್ಮಾಣ ಕಾರ್ಯ ಮಾಡಲಾಗಿದೆ ಎಂದು ಈ ವೇಳೆ ಹೇಳಲಾಯ್ತು. ಪುಸ್ತಕ ಬಿಡುಗಡೆ ಮಾಡಿ ಮಾತ್ನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ ಸಚಿವರು ಹಾಗೂ ಶಾಸಕರಿಗೆ ಧನ್ಯವಾದಗಳನ್ನ ಸಲ್ಲಿಸಿದ್ರು. ನವೆಂಬರ್ 2ಕ್ಕೆ ನೂರು ದಿನ ಪೂರೈಸಿದೆ. ಈ ಬಗ್ಗೆ ಸಾಧನೆಯ ಕಿರು ಪುಸ್ತಕ ಬಿಡುಗಡೆ ಮಾಡಿದ್ದು ಸಂತೋಷದ ವಿಷಯವೆಂದು ಹೇಳಿದ್ರು.

ಕಾರ್ಯಕ್ರದಲ್ಲಿ ಡಿಸಿಎಂ ಡಾ.ಅಶ್ವಥನಾರಾಯಣ, ಸಚಿವರಾದ ಆರ್.ಅಶೋಕ, ಮಾಧುಸ್ವಾಮಿ, ಕೆ.ಎಸ್ ಈಶ್ವರಪ್ಪ, ಸಿ.ಸಿ ಪಾಟೀಲ, ಪ್ರಭು ಚೌವ್ಹಾಣ, ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!