ಸಿಂದಗಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ

422

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಮಾಜ ಸುಧಾರಕ, ಮೌಢ್ಯದ ವಿರುದ್ಧ ಹೋರಾಡಿದ, ದೀನ ದಲಿತರ, ತಳಸಮುದಾಯದ ಪರವಾಗಿ ದನಿ ಎತ್ತಿದ, ಜಾತಿ, ಧರ್ಮಗಳ ಗೋಡೆ ಕೆಡವಲು ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಪಟ್ಟಣದ ತಾಲೂಕು ಆಡಳಿತ ಕಚೇರಿಯ ಸಭಾ ಭವನದಲ್ಲಿ ಆಚರಿಸಲಾಯಿತು.

ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಆರ್ಯ ಈಡಿಗ ಸಂಘದ ಅಧ್ಯಕ್ಷ ತಮ್ಮಣ್ಣ ವಿ. ಈಳಗೇರ, ಪ್ರಾಧ್ಯಾಪಕ ಹಯ್ಯಾಳಕರ ಸೇರಿದಂತೆ ಸಮಾಜದ ಮುಖಂಡರು, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಫೋಟೋ ಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು.

ಈ ವೇಳೆ ಶಿರಸ್ತೇದಾರ್ ಸುರೇಶ ಮ್ಯಾಗೇರಿ, ಅರವಿಂದ ಈಳಗೇರ, ಸಚಿನ್ ಈಳಗೇರ, ಬಸವರಾಜ್ ಬಾಗೇವಾಡಿ, ರುಕ್ಮಯ್ಯ, ರಾಮಯ್ಯ ಗುತ್ತೇದಾರ, ನರಸಯ್ಯಈಳಗೇರ, ಬಸವರಾಜ ಈಳಗೇರ, ದಿನೇಶ್, ಶರಣಯ್ಯ, ಶಿವಯ್ಯ, ಮಹೇಶ್ ಸದಾನಂದ, ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!