ಪ್ರಜಾಸ್ತ್ರ ಸುದ್ದಿ
ನವದೆಹಲಿ: ಸಂಸತ್ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಮಾತನಾಡಿದರು. ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದ ಇಂದು ಉತ್ತಮ ಸ್ಥಾನದಲ್ಲಿದೆ ಎಂದರು.
ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿರುವುದು ಹಾಗೂ ತ್ರಿವಳಿ ತಲಾಖ್ ರದ್ದುಗೊಳಿಸಿರುವುದು ಸೇರಿದಂತೆ ಅನೇಕ ನಿರ್ಧಾರಗಳಿಂದಾಗಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಿದೆ. ವಿಶ್ವದ ಹಲವು ದೇಶಗಳಿಗೆ ಭಾರತ ಸಹಾಯ ಮಾಡುತ್ತಿದೆ. 2047ರ ಹೊತ್ತಿಗೆ ಗತಕಾಲದ ಹೆಮ್ಮೆಯೊಂದಿಗೆ ಆಧುನಿಕತೆಯ ಎಲ್ಲ ಸೌಲಭ್ಯಗಳನ್ನು ಹೊಂದಿರಬೇಕು ಅಂತಾ ಹೇಳಿದರು.
ಯುವಕರು, ಮಹಿಳೆಯರು ದೇಶಕ್ಕೆ ದಾರಿ ತೋರಿಸುವ ಮುಂದಾಳತ್ವದಲ್ಲಿರಬೇಕು. ಬಡವರು, ಮಧ್ಯಮ ವರ್ಗದವರು ಸಮೃದ್ಧರಾಗಬೇಕು. ಜೊತೆಗೆ ಮಾನವೀಯ ಕರ್ತವ್ಯಗಳನ್ನು ಪೂರೈಸಬೇಕು ಅಂತಾ ತಿಳಿಸಿದರು.