ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕರೋನಾದಿಂದ ತತ್ತರಿಸಿ ಹೋಗಿರುವ ಭಾರತ, ಅಕ್ಷರಶಃ ಕಣ್ಣೀರಿನಲ್ಲಿ ಮುಳುಗಿದೆ. ಇದರ ನಡುವೆ ಪ್ರಧಾನಿ ಮೋದಿ, ನೂತನ ಸಂಸತ್ ಭವನ ನಿರ್ಮಾಣ ಮುಂದುವರೆಸಿರುವ ಸಂಬಂಧ ಸಂಸದ ರಾಹುಲ ಗಾಂಧಿ ಪ್ರಹಾರ ನಡೆಸಿದ್ದಾರೆ.
ಇದು ಸೆಂಟ್ರಲ್ ವಿಸ್ತಾ ಅಲ್ಲ.. ಕ್ರಮಿನಲ್ ವೇಸ್ಟೇಜ್ ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕೆಲಸವಾಗಬೇಕೆ ಹೊರತು ಹೊಸ ನಿವಾಸ ಬೇಕೆಂಬ ನಿಮ್ಮ ಹಠ ಮುಖ್ಯವಾಗಬಾರದು ಎಂದಿದ್ದಾರೆ.
ನೂತನ ಸಂಸತ್ ಭವನ ನಿರ್ಮಾಣಕ್ಕೆ ಈ ಮೊದ್ಲು 11,794 ಕೋಟಿ ಖರ್ಚು ಎನ್ನಲಾಗಿತ್ತು. ಪರಿಸ್ಕೃತ ದರದ ಬಳಿಕ ಅದು 13,450 ಕೋಟಿಯಾಗಿದೆ. ಇದನ್ನು 2022ರೊಳಗೆ ಮುಗಿಸುವ ಗುರಿಯನ್ನ ಕೇಂದ್ರ ಹೊಂದಿದೆ. ಹೀಗಾಗಿಯೇ ಸೆಂಟ್ರಿಲ್ ವಿಸ್ತಾ ಯೋಜನೆಯನ್ನ ಅಗತ್ಯ ವಸ್ತುಗಳ ಕಾಯ್ದೆ ಅಡಿ ತಂದು ಕಾಮಗಾರಿ ನಡೆಸ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.