ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ

119

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟ ನಗರಿಯ ವಿವಿಧ ತಾಲೂಕುಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲವು ಕಡೆ ಭಾರಿ ಮಳೆಯಾದೆರೆ, ಇನ್ನು ಕೆಲವು ಕಡೆ ಇಡಿ ದಿನ ಸಾಧಾರಣ ಮಳೆಯಾಗುತ್ತಲೇ ಇದೆ. ಇನ್ನು ಮಲೆನಾಡು, ಕರಾವಳಿ ಭಾಗದಲ್ಲಿ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ.

ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಬಂಡಿ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ನೀರು ಸೇತುವೆ ಮೇಲೆ ಬಿದ್ದಿದೆ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾನುವಾರವೂ ಮಳೆ ಮುಂದುವರೆದಿದ್ದು, ಹೊನ್ನಾವರದ ಗುಂಡಬಾಳ ಸುತ್ತಮುತ್ತ ಮನೆಗಳಿಗೆ ನೀರು ನುಗ್ಗಿವೆ.

ಜೋಯಿಡಾ ಕುಂಬಾರವಾಡ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದು ಸಂಚಾರಕ್ಕೆ ಅಡೆಚಣೆಯಾಗಿದೆ. ಇಲ್ಲಿನ ಜಲಾಶಯಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಕಾಫಿನಾಡು ಕೊಡಗಿನಲ್ಲೂ ಮಳೆ ಜೋರಾಗಿದೆ. ಎಂದಿನಂತೆ ಭಾಗಮಂಡಲದಲ್ಲಿ ನೀರು ರಸ್ತೆಗೆ ಬಂದಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗೆ ರಾಜ್ಯದ ಭಾಗದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆಸ್ತಿಪಾಸ್ತಿ ಸಾಕಷ್ಟು ಹಾನಿಯಾಗಿದೆ.




Leave a Reply

Your email address will not be published. Required fields are marked *

error: Content is protected !!