ಜಿಲ್ಲಾ ಚುನಾವಣಾ ರಾಯಭಾರಿಗಳನ್ನು ನೇಮಿಸಿದ ಆಯೋಗ

186

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಆಯೋಗ ಜಿಲ್ಲಾ ರಾಯಭಾರಿಗಳನ್ನು ನೇಮಕ ಮಾಡಿದೆ. ಒಂದೊಂದು ಜಿಲ್ಲೆಗೆ ಒಬ್ಬರಂತೆ ಸಾಧಕರನ್ನು ನೇಮಿಸಿ ಆದೇಶಿಸಿದೆ.

ರಾಯಚೂರಿಗೆ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ, ಕೊಪ್ಪಳಗೆ ಸ್ಟಾಂಡಪ್ ಕಾಮಿಡಿಯನ್ ಪ್ರಾಣೇಶ್, ವಿಜಯಪುರಕ್ಕೆ ಸೈಕ್ಲಿಂಗ್ ಚಾಂಪಿಯನ್ ಸಹನಾ ಕೂಡಿಗನೂರ, ಮಂಡ್ಯಕ್ಕೆ ನಟ ನೀನಾಸಂ ಸತೀಶ್, ಬಳ್ಳಾರಿಗೆ ಬೊಂಬೆಯಾಟ ಕಲಾವಿದ ಬೆಳಗಲ್ಲು ವೀರಣ್ಣ, ಕೊಡಗಿಗೆ ಸಾಮಾಜಿಕ ಕಾರ್ಯಕರ್ತ ಕೆ.ಯು ಮುತ್ತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಬೆಂಗಳೂರಿನ ಮೂರು ವಿಭಾಗಗಳಲ್ಲಿ ಬ್ಯಾಡ್ಮಿಂಟನ್ ಚಾಂಪಿಯನ್ ಅನೂಪ್ ಶ್ರೀಧರ್, ಕಬಡ್ಡಿ ಆಟಗಾರ್ತಿ ತೇಜಶ್ವಿನಿ ಬಾಯಿ, ಪ್ಯಾರಾ ಸ್ವಿಮ್ಮರ್ ಶರತ್ ಗಾಯಕ್ವಾಡ್, ಜಾನಪದ ಗಾಯಕ ಮೋಹನ್ ಕುಮಾರ್.ಎನ್ ಅವರನ್ನು ನೇಮಿಸಲಾಗಿದೆ. ಹೀಗೆ ಚುನಾವಣಾ ಆಯೋಗದ ರಾಯಭಾರಿಯಾದವರು, ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವ ಕೆಲಸ ಮಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!