ಚಂದ್ರಯಾನ-2 ಮೈಲುಗಲ್ಲಿಗೆ ಇನ್ನೊಂದು ಹೆಜ್ಜೆ

359

ಬೆಂಗಳೂರು: ಇಸ್ರೋದ ಮಹತ್ವದ ಯೋಜನೆ ಚಂದ್ರಯಾನ-2 ಕಕ್ಷೆ ಬದಲಾವಣೆಯಾಗಿದೆ. ಭಾನುವಾರ ಸಂಜೆ 6.21ರ ಟೈಂನಲ್ಲಿ ಕಕ್ಷೆ ಬದಲಾವಣೆ ಐದು ಹಾಗೂ ಕೊನೆಯ ಚಟುವಟಿಕೆ ನಡೆದಿದೆ. ಹೀಗಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಇನ್ನೊಂದು ಹೆಜ್ಜೆ ಬಾಕಿ ಉಳಿದಿದೆ.

ಸೆಪ್ಟೆಂಬರ್ 7ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರ್ತಿದ್ದು, ಅಂದು ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಜೊತೆ ಕುಳಿತುಕೊಂಡು ಚಂದ್ರನ ಮೇಲೆ ಲ್ಯಾಂಡರ್ ಇಳಿವುದನ್ನ ನೋಡಲಿದ್ದಾರೆ.

ಐದು ಕಾಲುಗಳುಳ್ಳ ಗ್ರಹನೌಕೆ ವಿಕ್ರಂ ಚಂದ್ರನ ಮೇಲೆ ಸೆಪ್ಟೆಂಬರ್ 7ರಂದು ಇಳಿಯಲಿದೆ. ಆರ್ಬಿಟರ್ ಒಂದು ವರ್ಷ ಚಂದ್ರನ ಸುತ್ತ ಸುತ್ತಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಇದರ ಜೊತೆಗೆ ರೊಬೊಟಿಕ್ ರೊವರ್ ಪ್ರಜ್ಞಾನ್ ಚಂದ್ರನ ಪ್ರದೇಶದಲ್ಲಿ ಸುತ್ತು ಹೊಡೆಯುವ ಮೂಲಕ ಅಧ್ಯಯನ ನಡೆಸಲಿದೆ.




Leave a Reply

Your email address will not be published. Required fields are marked *

error: Content is protected !!