ಮಾಧ್ಯಮದವರ ಮೇಲೆ ಹಲ್ಲೆ: ನಾಲ್ವರು ಅರೆಸ್ಟ್

379

ತುಮಕೂರು: ಕೈಗಾರಿಕೆ ಪ್ರದೇಶದಿಂದ ಸ್ಥಳೀಯರಿಗೆ ಸಮಸ್ಯೆಯಾಗ್ತಿರುವ ಸುದ್ದಿ ಮಾಡಲು ಹೋದ ಖಾಸಗಿ ಚಾನೆಲ್ ವರದಿಗಾರರು ಹಾಗೂ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ.

ತುಮಕೂರಿನ ಸತ್ಯಮಂಗಲ ಕೈಗಾರಿಕೆ ಪ್ರದೇಶದಲ್ಲಿನ ಬೇಳೂರು ಬಾಯರ್ಸ್ ಮೆಡಿಷನ್ ಕಂಪನಿಯ ರಿಯಾಕ್ಟರ್ ಜೂನ್ 8ರಂದು ಸ್ಫೋಟಗೊಂಡಿತ್ತು. ಇದ್ರಿಂದಾಗಿ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದನ್ನ ಸುದ್ದಿ ಮಾಡಲು ಮಾಧ್ಯಮದವರು ಹೋಗಿದ್ರು. ಈ ವೇಳೆ ಅಲ್ಲಿನ ವ್ಯವಸ್ಥಾಪಕರು ಸಿಬ್ಬಂದಿಗೆ ಹೇಳಿಸಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರ ಆರೋಗ್ಯ ವಿಚಾರಿಸಿದ್ರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕೆ ಆದೇಶಿಸಿದ ಡಿಸಿಎಂ, ಸಂಬಂಧಪಟ್ಟವರನ್ನ ಬಂಧಿಸುವಂತೆ ಹೇಳಿದ್ರು. ಈ ಬಗ್ಗೆ ತುಮಕೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬೇಳೂರು ಬಾಯರ್ಸ್ ಮೆಡಿಷನ್ ಫ್ಯಾಕ್ಟರಿ ಮ್ಯಾನೇಜರ್ ಸೇರಿ ನಾಲ್ವರನ್ನ ಬಂಧಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!