ಪ್ರಜಾಸ್ತ್ರ ಸುದ್ದಿ
ಕಲಬುರಗಿ: ರಾಮತೀರ್ಥ ನಗರದ ಗಡಿನಾಡ ಸಂಗೀತ ಸೇವಾ ಸಂಸ್ಥೆಯಿಂದ ಕೊಡಮಾಡುವ ಗಡಿನಾಡ ಕಲಾ ರತ್ನ ಪ್ರಶಸ್ತಿ-2022ಕ್ಕೆ ವಿವಿಧ ಕ್ಷೇತ್ರಗಳ 7 ಜನ ಸಾಧಕರನ್ನು ಆಯ್ಕೆ ಮಾಡಿ ಗೌರವಿಸಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.
ಕಲಬುರಗಿಯ ಗೋದುತಾಯಿ ಮಹಿಳಾ ವಿವಿಯ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸೀಮಾ ಪಾಟೀಲ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪುಟ್ಟಮಣಿ ದೇವಿದಾಸ, ಶರಣಬಸ ವಿವಿಯ ಸಂಗೀತ ವಿಭಾಗದ ಡೀನ್ ರೇವಯ್ಯ ವಸ್ತ್ರದಮಠ, ಹಿರಿಯ ಗಾಯಕ ಗುರುಲಿಂಗಯ್ಯ ಹಿರೇಮಠ ಹಿತ್ತಲಶಿರೂರ, ಮಳಖೇಡ ಸರ್ಕಾರಿ ಶಾಲೆ ಶಿಕ್ಷಕಿ ಸಾವಿತ್ರಿ ಎ.ಪತ್ತಾರ, ಕಲಬುರಗಿ ವಾರ್ತಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಜಿ.ಚಂದ್ರಕಾಂತ ಹಾಗೂ ವೈದಿಕರಾದ ಕಾರ್ತಿಕಯ್ಯ ಹಿರೇಮಠ ರಾಜೋಳಾ ಅವರನ್ನು ಸನ್ಮಾನಿಸಲಾಗಿದೆ.