ಪ್ರಜಾಸ್ತ್ರ ಸುದ್ದಿ
ಮಂಗಳೂರು: ಕೃಷಿ ಅಧ್ಯಯನಕ್ಕೆಂದು ದಕ್ಷಿಣ ಕನ್ನಡ ಜಿಲ್ಲೆ ಕೇಪು ಗ್ರಾಮದ ವಾರಣಾಸಿ ಫಾರ್ಮ್ ಹೌಸ್ ಗೆ ಬಂದಿದ್ದ ಯುವತಿ ಮೃತಪಟ್ಟಿದ್ದಾಳೆ. ಡಾ.ಮೈಜೀ ಕರೋಲ್ ಫರ್ನಾಂಡಿಸ್ (31) ಅನ್ನೋ ಯುವತಿ ಮೃತಪಟ್ಟಿದ್ದಾಳೆ.
ಕೃಷಿ ಅಧ್ಯಯನಕ್ಕೆ ಬಂದಿದ್ದ ಡಾ.ಮೈಜೀ, ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಮೈಜಿಗೆ ಈಜು ಬರುತಿತ್ತಾ, ಬಂದರೆ ಸಾವನ್ನಪ್ಪಿದ್ದು ಹೇಗೆ? ಒಂದು ವೇಳೆ ಈಜು ಬರದಿದ್ದರೆ ಕೃಷಿ ಹೊಂಡಕ್ಕೆ ಇಳಿದಿದ್ದು ಯಾಕೆ, ಅವರೊಬ್ಬರೆ ಬಂದಿದ್ದರಾ ಅಥವ ಜೊತೆಗೆ ಯಾರಾದರೂ ಇದ್ದರಾ ಅನ್ನೋ ಹಲವು ಪ್ರಶ್ನೆಗಳು ಮೂಡಿವೆ.
ಸಾವನ್ನಪ್ಪಿರುವ ಡಾ.ಮೈಜೀ ಮಂಗಳೂರಿನ ಪ್ರಶಾಂತನಗರದ ನಿವಾಸಿಯಾಗಿದ್ದಾರೆ. ವಿಷಯ ತಿಳಿದ ವಿಟ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.