ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿರಿಯ ಪತ್ರಕರ್ತ ಹನುಮೇಶ್ ಕೃ. ಯಾವಗಲ್ ಅವರಿಗೆ ಸ್ಮೃತಿ ಸಮೃದ್ಧಿ ಸಂಸ್ಥೆ ನೀಡುವ ‘ಗೋ ಗ್ರೀನ್ ಅರ್ಥ್’ ಪ್ರಶಸ್ತಿ ದೊರೆತಿದೆ. ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸ್ಮೃತಿ ಸಮೃದ್ಧಿ ಸಂಸ್ಥೆ ಮುಖ್ಯಸ್ಥ ಶಿವಕುಮಾರ್, ಲೆಟ್ಸ್ ವೆಜ್ ಕಂಪನಿಯ ಮುಖ್ಯಸ್ಥ ವಿಶಾಲ್ ಬೇಗ್ ಜ್ಯೆನ್, ಪಿಎಸ್ಐ ರಾಜೇಶ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂಸ್ಥೆ ಗಿಡಗಳು, ತರಕಾರಿ, ಬೇಳೆಕಾಳುಗಳನ್ನು ಬಳಸಿ ಲೆಟ್ಸ್ ವೆಜ್ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಮೂಲಕ ಸಸ್ಯಹಾರ ಸೇವನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.