ಬೆಂಗಳೂರು: ಕೈಗಾರಿಕೋದ್ಯಮಗಳನ್ನ ಮರುಪ್ರಾರಂಭಕ್ಕೆ ಕೇಂದ್ರದಿಂದ ಮೇ 3ರ ನಂತರ ಮಾರ್ಗಸೂಚಿ ನರೀಕ್ಷೆ ಮಾಡಲಾಗ್ತಿದೆ. ಹೀಗಾಗಿ ಕೈಗಾರಿಕೆ ಕೆಲಸ ಶುರು ಮಾಡುವ ಸಂಬಂಧ ಸಿದ್ಧತೆ ಮಾಡಿಕೊಳ್ಳಿಯೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಧ್ಯಾಹ್ನ ಹೇಳಿದಂತೆ ಸಂಜೆ ಕೈಗಾರಿಕೋದ್ಯಮಗಳ ಸಂಘಟನೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉದ್ಯಮಿಗಳು, ಸಂಘಟನೆಗಳು ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸರ್ಕಾರದ ಕ್ರಮವನ್ನ ಸ್ವಾಗತಿಸಿದ್ದಾರೆ. ಕಳೆದೊಂದು ತಿಂಗಳಿಂದ ಕೈಗಾರಿಕೋದ್ಯಮದ ಸಂಕಷ್ಟಕ್ಕೆ ತುತ್ತಾಗಿರುವುದು ಗೊತ್ತು. ಆದ್ರೆ, ಮಾಲೀಕರು ಕಾರ್ಮಿಕರ ವೇತನ ಕಡಿತ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಗ್ರೀನ್ ಝೋನ್ ಗಳಲ್ಲಿ ಕೈಗಾರಿಕೆ ಶುರು ಮಾಡಲು ಅನುಮತಿ ನೀಡಲಾಗಿದೆ. ಮೇ 3ರ ಬಳಿಕ ಕೇಂದ್ರದಿಂದ ಬರುವ ಮಾರ್ಗಸೂಚಿಗಳನ್ನ ನೋಡಿಕೊಂಡು ಅದರನ್ವಯ ಕ್ರಮ ತೆಗೆದುಕೊಳ್ಳಲಾಗುವುದು. ನೀವು ಸಲ್ಲಿಸದ ಬೇಡಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರ ಚೌಕಟ್ಟಿನಲ್ಲಿ ಸಾಧ್ಯವಾದಷ್ಟು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಎಫ್ ಕೆಸಿಸಿಐ, ಫಿಕ್ಕಿ, ಸಣ್ಣಕೈಗಾರಿಕೆ ಸಂಘ, ಅಸೋಚಾಂ, ಮಹಿಳಾ ಉದ್ಯಮಗಳ ಒಕ್ಕೂಟ, ಸಿಐಐ, ಅವೇಕ್ ಸೇರಿ ಮತ್ತಿತರ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ರು.