ಪ್ರಜಾಸ್ತ್ರ ಸುದ್ದಿ
ಧಾರವಾಡ: ನಾಡೋಜ ದಿವಂಗತ ಡಾ.ಚೆನ್ನೀವರ ಕಣವಿ ಅವರ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಎಸ್ ಡಿಎಂ ಡೀಮ್ಡ್ ವಿವಿಯಲ್ಲಿ ಎರಡು ಚಿನ್ನದ ಪದಕ ಸ್ಥಾಪಿಸಲಾಗುವುದು ಎಂದು ಕಣವಿ ಪುತ್ರಿ ಪ್ರಯದರ್ಶಿ ಕಣವಿ ಹೇಳಿದ್ದಾರೆ.
ಕಣವಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಂತರ ವೆಚ್ಚವನ್ನು ಸರ್ಕಾರ ಭರಸಿವುದಾಗಿ ಹೇಳಿದೆ. ಸಿಎಂ ಆದಿಯಾಗಿ ಸಚಿವರು, ಶಾಸಕರು, ಮಠಾಧೀಶರು, ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಅವರ ಆಸ್ಪತ್ರೆಗೆ ಭರಿಸಲು ಸಿದ್ಧವಿದ್ದ ಹಣವನ್ನು ಸಮಾಜಿಕ ಕಾರ್ಯಕ್ಕೆ ಉಪಯೋಗಿಸುತ್ತೇವೆ ಎಂದಿದ್ದಾರೆ.